Hasiru hadi : ಹಸಿರು ಹಾದಿ
Material type:
TextLanguage: Kannada Publication details: Sagara Akshara Prakashana 1999Description: 179Subject(s): DDC classification: - 574.5092K YALH
| Item type | Current library | Collection | Call number | Status | Barcode | |
|---|---|---|---|---|---|---|
|
|
St Aloysius Library | Biology | 574.5092K YALH (Browse shelf(Opens below)) | Available | 054847 |
ದಕ್ಷತೆ ಕೆಲವರಿಗೆ ಹುಟ್ಟಿನಿಂದಲೇ ಬರುತ್ತದೆ; ಸ್ವಭಾವದಿಂದಲೇ ಸಿದ್ಧವಾಗಿರುತ್ತದೆ. ಮತ್ತೆ ಕೆಲವರು ಕಲಿಯುತ್ತಾರೆ, ಅಭ್ಯಾಸದಿಂದ ಸಿದ್ಧಿಸಿಕೊಳ್ಳುತ್ತಾರೆ. ಆದರೆ ಪ್ರಾಮಾಣಿಕತೆಗೆ ಹೆಚ್ಚಿನ ಸಂಸ್ಕಾರದ ಅಗತ್ಯವಿದೆ. ಸ್ವಭಾವದ ಒತ್ತಾಸೆಯಿರಬೇಕು ದಿಟ, ಆದರೆ ಕರ್ತವ್ಯ ಶ್ರದ್ದೆ, ಸಂಯಮ ನಿಸ್ಪೃಹತೆ, ಸ್ಥೈರ್ಯ ಇದ್ದರೆ ಪ್ರಾಮಾಣಿಕತೆ ಅರ್ಥವತ್ತಾಗುತ್ತದೆ. ದಕ್ಷತೆಗೆ ಅಗತ್ಯವಾದ ಧೈರ್ಯ ಪ್ರಾಮಾಣಿಕತೆಗೂ ಬೇಕು. ಅಂಜುಕುಳಿಯಾಗಿದ್ದರೆ ದಕ್ಷತೆಯೂ ಇಲ್ಲ, ಪ್ರಾಮಾಣಿಕತೆಯೂ ಇಲ್ಲ. ಧೈರ್ಯದಲ್ಲಿ ಸಾತ್ವಿಕ (ಎಂದರೆ ತತ್ವ ನಿಷ್ಠೆಯಿಂದ ಮೈದಳೆದದ್ದು), ರಾಜಸಿಕ (ಹುಮ್ಮಸ್ಸಿನಿಂದ ಉತ್ಸಾಹದಿಂದ ಕಾಣಿಸಿಕೊಂಡದ್ದು) ಮತ್ತು ತಾಮಸಿಕ (ಭಂಡ ಧೈರ್ಯ, ವಿವೇಚನೆಯಿಲ್ಲದ್ದು) ಎಂದು ಮೂರು ಬಗೆಗಳು. ಯಲ್ಲಪ್ಪ ರೆಡ್ಡಿಯವರ ಬದುಕಿನುದ್ದಕ್ಕೂ ಸಾತ್ವಿಕ ಧೈರ್ಯ ಕೆಲಸ ಮಾಡುತ್ತ ಬಂದಿದೆ. ಕರ್ತವ್ಯ ಪ್ರಜ್ಞೆಗೆ ಅಡ್ಡಿಯಾಗಿ ಬರುವ ಯಾವುದಕ್ಕೂ ಮಣಿದಿರುವ ಧೈರ್ಯ ಅದು. ಅಧಿಕಾರವಿರುವುದು ಶಿಷ್ಟರಕ್ಷಣ, ದುಷ್ಟಶಿಕ್ಷಣಗಳಿಗಾಗಿ; ಅಮಾಯಕರನ್ನು ಶೋಷಿಸಲೆಂದಲ್ಲ. ಈ ಅರಿವು ಅವರ ಅಧಿಕಾರಾವಧಿಯಲ್ಲಿ ಬೇರೂರಿದ್ದಿತಾಗಿ ಅವರು ದಿಟ್ಟತನದಿಂದಲೇ ತಮ್ಮ ಅಧಿಕಾರವನ್ನು ನಿರ್ವಹಿಸುವಂತಾಯಿತು. ಇದು ಈ ಪುಸ್ತಕದಲ್ಲಿ ಹಾಸುಹೊಕ್ಕಾಗಿ ಬಂದಿರುವ ವಿವರ.
There are no comments on this title.