Kandaddu kandahage ಕಂಡದ್ದು ಕಂಡಹಾಗೆ
Material type:
TextLanguage: Kannada Publication details: Bengaluru Patrike Prakashana 2004Description: 128Subject(s): DDC classification: - K894.9 LANK
| Item type | Current library | Collection | Call number | Status | Barcode | |
|---|---|---|---|---|---|---|
|
|
St Aloysius Library | Kannada | K894.9 LANK (Browse shelf(Opens below)) | Available | 064266 |
‘ಕಂಡದ್ದು ಕಂಡಹಾಗೆ’ ಕವಿ, ಲೇಖಕ, ಕಲಾವಿದ, ಪತ್ರಕರ್ತ ಪಿ.ಲಂಕೇಶ್ ಅವರ ಲೇಖನ ಸಂಕಲನ. ಕನ್ನಡ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದ ಬಹುಮುಖ ಪ್ರತಿಭೆ ಪಿ. ಲಂಕೇಶ್ ತನ್ನ ಸುತ್ತಲಿನ ಸಮಾಜದ ಪ್ರತಿಯೊಂದನ್ನೂ ತಮ್ಮದೇ ವಿಶೇಷ ದೃಷ್ಟಿಕೋನದಲ್ಲಿ ಗ್ರಹಹಿಸುತ್ತಿದ್ದ ವ್ಯಕ್ತಿ, ಆ ಗ್ರಹಿಕೆಗಳಿಗೆ ವಿಭಿನ್ನ ರೂಪ ನೀಡುತಿದ್ದ ಲೇಖಕ. ಈ ಕೃತಿಗೆ ಬೆನ್ನುಡಿ ಬರೆಯುತ್ತಾ ಲಂಕೇಶ್ ಮತ್ತೊಂದು ವಿಚಾರವನ್ನು ಓದುಗರ ಮುಂದಿಡುತ್ತಾರೆ. ‘ಸಾಹಿತ್ಯವನ್ನು ಸೃಷ್ಟಿಸುವುದು ಮಹಾ ಏಕಾಂಗಿತನದ ಕರ್ಮ; ಸೃಷ್ಟಿಸುವವನಲ್ಲಿ ಅಸಹಾಯಕತೆ ಮತ್ತು ಭಯವನ್ನು ಹುಟ್ಟಿಸುವ, ಅಭ್ಯಾಸದಿಂದ ಬಂದ ಯಾವ ಸಾಮಾಜಿಕ ನಿಲುವುಗಳೂ ಆತನಿಗೆ ನೆರವಾಗದೆ ಇರುವ ಸ್ಥಿತಿ; ಎಲ್ಲ ಕ್ಲೀಷೆಗಳನ್ನೂ, ಸ್ವೀಕೃತ ಸಾಮಾಜಿಕ, ನಿಲುವುಗಳನ್ನೂ ತಿರಸ್ಕರಿಸಿ ಜೀವನವನ್ನು ಗ್ರಹಿಸುವ ಕೆಲಸ.
ಇಂಥ ಸಾಹಿತ್ಯ ಸೃಷ್ಟಿಯಾದಾಗಲೆಲ್ಲ ಅದರ ಅರ್ಥಪೂರ್ಣತೆಯನ್ನು ಗ್ರಹಿಸುವ, ಮಿಕ್ಕ ಸಾಹಿತ್ಯಪ್ರಿಯರೊಂದಿಗೆ ಹಂಚಿಕೊಳ್ಳುವ ಕೆಲಸ ಮಾಡುವವನೇ ವಿಮರ್ಶಕ. ಈತನನ್ನು ಕೆಟ್ಟ ಕವಿಗಳು ರಸಿಕ, ಸಹೃದಯಿ, ಗೆಳೆಯ ಇತ್ಯಾದಿಯಾಗಿ ಹೊಗಳಿ ಇವನಿಂದ ಒಳ್ಳೆಯ ಅಭಿಪ್ರಾಯ ಪಡೆಯಲು ಯತ್ನಿಸುವುದುಂಟು. ಆದರೆ ಸಾಹಿತ್ಯಕೃತಿಗಳನ್ನು ಸೃಷ್ಟಿಸುತ್ತಿರುವಾಗ ಅವರೆಲ್ಲರ ಕ್ರಿಯೆಯ ಬಗ್ಗೆ ಸಹಾನುಭೂತಿಯನ್ನು ಇಟ್ಟುಕೊಂಡೂ ನ್ಯಾಯವಂತನಾಗಿ ಇರಬಲ್ಲವನು, ಭಾವುಕನಾಗಿ ಕವಿಯ ಜಗತ್ತನ್ನು ಪ್ರವೇಶಿಸಿದರೂ ವೈಚಾರಿಕತೆ ಮತ್ತು ಮಾನದಂಡವನ್ನು ಬಳಸಿ ಕವಿಯ ಕೃತಿಯನ್ನು ನೋಡಬಲ್ಲವನು ವಿಮರ್ಶಕ, ಅಂದರೆ, ಕೃತಿಯ ಬಗ್ಗೆ ಉತ್ತೇಕ್ಷೆ, ಸುಳ್ಳು, ಅನಗತ್ಯ ಹೊಗಳಿಕೆ, ಅವೈಚಾರಿಕ ಖಂಡನೆ ಮುಂತಾದ್ದರಿಂದ ದೂರವಿದ್ದು ಕೃತಿಗೆ ತನ್ನನ್ನುತಾನು ಕೊಟ್ಟಕೊಂಡೂ ನಿಷ್ಠುರವಾಗಿರಬಲ್ಲವನು ವಿಮರ್ಶಕ’ ಎನ್ನುತ್ತಾರೆ. ಈ ಕೃತಿಯಲ್ಲಿ ಹಲವು ಕ್ಷೇತ್ರಗಳ ವ್ಯಕ್ತಿಗಳ ಬಗ್ಗೆ ವಿಚಾರಗಳ ಬಗ್ಗೆ ಲಂಕೇಶರು ನೀಡಿರುವ ಒಳನೋಟದ ಲೇಖನಗಳಿವೆ.
There are no comments on this title.