Local cover image
Local cover image
Amazon cover image
Image from Amazon.com
Image from Google Jackets

Mragashira ಮೃಗಶಿರ

By: Material type: TextTextLanguage: Kannada Publication details: Bengaluru Abhinava Prakashana 2019Description: 147ISBN:
  • 9788194239307
Subject(s): DDC classification:
  • K894.3 SHRM
Summary: ಬದುಕು ಅರ್ಥವಾಗುವುದು ಒಂದಿಷ್ಟು ಬದುಕಿದ ಮೇಲೆಯೇ. ಹಾಗಿದ್ದೂ ಅದು ಅರ್ಥವಾಗದೇ ಇರುವುದೇ ಹೆಚ್ಚು. ಮುಕ್ಕಾಲು ಪಾಲು ಪ್ರಾಯ ಮುಗಿಸಿಯೂ ‘ಜಗತ್ತನ್ನು ಅರ್ಥಮಾಡಿಕೊಂಡಿರುವೆ’ ಎಂದುಕೊಂಡರೂ ಅದು ಉತ್ಪ್ರೇಕ್ಷೆಯೇ! ಜೀವನದ ನಿಜವಾದ ಅರ್ಥ ಯಾವುದರಲ್ಲಿದೆ. ಬಂಧನದಲ್ಲೋ, ಬಿಡುಗಡೆಯಲ್ಲೋ, ಸಂಸಾರದಲ್ಲೋ, ಸಾಧನೆಯಲ್ಲೋ, ಪ್ರೀತಿ-ವಿಶ್ವಾಸದಲ್ಲೋ, ದ್ವೇಷ-ನಿಷ್ಠುರತೆಯಲ್ಲೋ, ಇವೆಲ್ಲದರ ಹೊರತಾಗಿಯೂ ಕಾಡುವ ವಿಚಿತ್ರ ವ್ಯಾಕುಲತೆ, ಎಲ್ಲವನ್ನೂ ಮೀರಬೇಕೆನ್ನುವ ತುಡಿತದಲ್ಲೋ, ಇದಕ್ಕೆಲ್ಲ ಉತ್ತರ ಸಿಕ್ಕಿಲ್ಲ. ಇಂತಹ ತಾತ್ವಿಕ ಚಿಂತನೆ ಅನ್ನುವ ಲೌಕಿಕದ ಹೊರತಾದ ಭಿನ್ನ ಆಯಾಮದತ್ತ ಲೌಕಿಕದ ಸಂಗತಿಯ ಮೂಲಕವೇ ಹೊರಳುವ ಪ್ರಯತ್ನದಂತಿದೆ ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ. ಕಾದಂಬರಿ ಸ್ವಾತಂತ್ರ್ಯ ಹೋರಾಟ ಕಾಲದ ಸಂದರ್ಭದ ಘಟನೆಯೊಂದನ್ನು ಹೇಳುತ್ತಾ, ವಿಶಿಷ್ಟ ಪ್ರಾದೇಶಿಕ ಚೆಲುವು, ಹಾಗೂ ಜೀವನ ಶೈಲಿಗಳ ಜೊತೆ, ಪ್ರಕೃತಿಯ ನಡುವೆ ಬದುಕುತ್ತಿದ್ದ ಆಧುನಿಕತೆಯಿಂದ ದೂರವಿದ್ದ ಉತ್ತರ ಕನ್ನಡದ ಜನಜೀವನವನ್ನು ತೆರೆದಿಡುತ್ತದೆ. ನದಿ ದಂಡೆಯಲ್ಲಿ ನಿಂತು ಬಲೆಯ ಬೀಸಿದರೆ ಅದು ನಿಧಾನಕ್ಕೆ ನೀರಿನಲೆಗಳ ನಡುವೆ ತೆರೆದುಕೊಳ್ಳುತ್ತಾ ಹೋದಂತೆ ಮುಖ್ಯ ನಿರೂಪಕ ಕಾದಂಬರಿಯ ಉದ್ದಕ್ಕೂ ಸಂದರ್ಶಿಸುವ ಸುಬ್ರಾಯಪ್ಪ, ಶಂಕ್ರ, ಅಂತತ್ತೆ, ಲಕ್ಷ್ಮೀ, ಬಂಟ್ ಮಾಸ್ತರ, ತಂಗು, ನರಸಿಂಹ, ಗಪ್ಪತಿ ಮುಂತಾದ ಹಳ್ಳಿ ಬದುಕಿನ ಪಾತ್ರಗಳು, ಆ ಪಾತ್ರಗಳು ತೆರೆದಿಡುವ ನೆನಪುಗಳ ಬುತ್ತಿಯೇ ಇಡೀ ಕಾದಂಬರಿಯನ್ನಾಗಿಸಿದ್ದಾರೆ ಕಥೆಗಾರರು.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.3 SHRM (Browse shelf(Opens below)) Available 073974
Total holds: 0

ಬದುಕು ಅರ್ಥವಾಗುವುದು ಒಂದಿಷ್ಟು ಬದುಕಿದ ಮೇಲೆಯೇ. ಹಾಗಿದ್ದೂ ಅದು ಅರ್ಥವಾಗದೇ ಇರುವುದೇ ಹೆಚ್ಚು. ಮುಕ್ಕಾಲು ಪಾಲು ಪ್ರಾಯ ಮುಗಿಸಿಯೂ ‘ಜಗತ್ತನ್ನು ಅರ್ಥಮಾಡಿಕೊಂಡಿರುವೆ’ ಎಂದುಕೊಂಡರೂ ಅದು ಉತ್ಪ್ರೇಕ್ಷೆಯೇ! ಜೀವನದ ನಿಜವಾದ ಅರ್ಥ ಯಾವುದರಲ್ಲಿದೆ. ಬಂಧನದಲ್ಲೋ, ಬಿಡುಗಡೆಯಲ್ಲೋ, ಸಂಸಾರದಲ್ಲೋ, ಸಾಧನೆಯಲ್ಲೋ, ಪ್ರೀತಿ-ವಿಶ್ವಾಸದಲ್ಲೋ, ದ್ವೇಷ-ನಿಷ್ಠುರತೆಯಲ್ಲೋ, ಇವೆಲ್ಲದರ ಹೊರತಾಗಿಯೂ ಕಾಡುವ ವಿಚಿತ್ರ ವ್ಯಾಕುಲತೆ, ಎಲ್ಲವನ್ನೂ ಮೀರಬೇಕೆನ್ನುವ ತುಡಿತದಲ್ಲೋ, ಇದಕ್ಕೆಲ್ಲ ಉತ್ತರ ಸಿಕ್ಕಿಲ್ಲ. ಇಂತಹ ತಾತ್ವಿಕ ಚಿಂತನೆ ಅನ್ನುವ ಲೌಕಿಕದ ಹೊರತಾದ ಭಿನ್ನ ಆಯಾಮದತ್ತ ಲೌಕಿಕದ ಸಂಗತಿಯ ಮೂಲಕವೇ ಹೊರಳುವ ಪ್ರಯತ್ನದಂತಿದೆ ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ.
ಕಾದಂಬರಿ ಸ್ವಾತಂತ್ರ್ಯ ಹೋರಾಟ ಕಾಲದ ಸಂದರ್ಭದ ಘಟನೆಯೊಂದನ್ನು ಹೇಳುತ್ತಾ, ವಿಶಿಷ್ಟ ಪ್ರಾದೇಶಿಕ ಚೆಲುವು, ಹಾಗೂ ಜೀವನ ಶೈಲಿಗಳ ಜೊತೆ, ಪ್ರಕೃತಿಯ ನಡುವೆ ಬದುಕುತ್ತಿದ್ದ ಆಧುನಿಕತೆಯಿಂದ ದೂರವಿದ್ದ ಉತ್ತರ ಕನ್ನಡದ ಜನಜೀವನವನ್ನು ತೆರೆದಿಡುತ್ತದೆ. ನದಿ ದಂಡೆಯಲ್ಲಿ ನಿಂತು ಬಲೆಯ ಬೀಸಿದರೆ ಅದು ನಿಧಾನಕ್ಕೆ ನೀರಿನಲೆಗಳ ನಡುವೆ ತೆರೆದುಕೊಳ್ಳುತ್ತಾ ಹೋದಂತೆ ಮುಖ್ಯ ನಿರೂಪಕ ಕಾದಂಬರಿಯ ಉದ್ದಕ್ಕೂ ಸಂದರ್ಶಿಸುವ ಸುಬ್ರಾಯಪ್ಪ, ಶಂಕ್ರ, ಅಂತತ್ತೆ, ಲಕ್ಷ್ಮೀ, ಬಂಟ್ ಮಾಸ್ತರ, ತಂಗು, ನರಸಿಂಹ, ಗಪ್ಪತಿ ಮುಂತಾದ ಹಳ್ಳಿ ಬದುಕಿನ ಪಾತ್ರಗಳು, ಆ ಪಾತ್ರಗಳು ತೆರೆದಿಡುವ ನೆನಪುಗಳ ಬುತ್ತಿಯೇ ಇಡೀ ಕಾದಂಬರಿಯನ್ನಾಗಿಸಿದ್ದಾರೆ ಕಥೆಗಾರರು.

There are no comments on this title.

to post a comment.

Click on an image to view it in the image viewer

Local cover image