000 04999nam a22002057a 4500
005 20250407103843.0
008 250120b ||||| |||| 00| 0 eng d
040 _cAL
041 _aKannada
082 _223
_aK894.3
_bGURA
100 _aGuruprasad Kantalagere
_9207678
100 _bಗುರುಪ್ರಸಾದ್ ಕಂಟಲಗೆರೆ
_9207679
245 _aAtrocity
_bಅಟ್ರಾಸಿಟಿ
260 _aTumkuru
_bVenupraveen Kantalagere
_c2025
300 _a113 p.
_bPB
_c21x14 cm.
365 _aBLCR-000064
_b₹104.00
_c
_d₹130.00
_e20%
_f13-01-2025
520 _aಗಡಿ ದಾಟಿದ ಗುರು ಎರಡು ಕಾರಣಗಳಿಗಾಗಿ ಬಹಳ ಬಹಳ ಮುಖ್ಯವಾದ ಕಾದಂಬರಿ ಇದು. ಮೊದಲನೆಯದು ಇಲ್ಲಿಯ ನಿರ್ಲಿಪ್ತತೆ, ಎರಡನೆಯದು ಇಲ್ಲಿಯ ಸ್ವ-ವಿಮರ್ಶೆ, ಕನ್ನಡ ಸಾಹಿತ್ಯಲೋಕದ ಒಳ-ಹೊರಗೆ ಗಟ್ಟಿದನಿಯಲ್ಲಿ, ದಿಟ್ಟತನದಲ್ಲಿ ಆರಂಭಗೊಂಡ ದಲಿತ ಸಾಹಿತ್ಯ ಕೆಲವೇ ವರ್ಷಗಳಲ್ಲಿ ಆತ್ಮಕಥನಗಳ ದಾರಿಗೆ ಹೊರಳಿಕೊಂಡಾಗ ಸಕಲೆಂಟು ವೇದನೆಗಳ ಭಾವಪೂರ್ಣ ನಿವೇದನೆಯ ಜಾಡಿನಿಂದ ಇದು ಹೇಗೆ ತಪ್ಪಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಮತ್ತು ಕುತೂಹಲ ಸಾಹಿತ್ಯದ ಓರ್ವ ವಿದ್ಯಾರ್ಥಿಯಾಗಿ ನನ್ನದಾಗಿತ್ತು. ಗುರುಪ್ರಸಾದ್ ಕಂಟಲಗೆರೆಯವರ : ಈ ಕಿರು ಕಾದಂಬರಿ ಉತ್ತರವಾಗಿಯೂ ಮತ್ತು ಕನ್ನಡ ದಲಿತ ಸಾಹಿತ್ಯದ ಬಗ್ಗೆ ಬಹಳ ದೊಡ್ಡ ಭರವಸೆಯಾಗಿಯೂ ಮೂಡಿ ಬಂದಿದೆ. ಸಮುದಾಯದ ಸಂಕೀರ್ಣ ಜೀವನಾನುಭವಗಳನ್ನು ಉಪಮೆ-ರೂಪಕಾದಿ ಯಾವ ಸಾಹಿತ್ಯ ಪರಿಕರಗಳಿಂದಲೂ ನೇವರಿಸದೆ ಬದುಕಿನ ತೀವ್ರತೆಯನ್ನು ಮುಟ್ಟಿಮುಟ್ಟಿ ಮಾತಾಡಿಸುವಂಥ ಕೃತಿ ಇದು, ಶಾಸ್ತ್ರಗಳ, ನಿಯಮ-ನಿಬಂಧನೆಗಳ, ಸಿದ್ಧಾಂತಗಳ ಚೌಕಟ್ಟುಗಳನ್ನು ಮೆತ್ತಗೆ ಹರಿದು, ತನ್ನನ್ನು ತಾನೇ ನೋಡುವಂತೆ ಒತ್ತಾಯಿಸುವ ಈ ಕೃತಿಯನ್ನು, ಗಾತ್ರದ ಕಾರಣಕ್ಕಷ್ಟೇ ಕಿರು ಕಾದಂಬರಿ ಎಂದು ಪರಿಭಾವಿಸಬೇಕೇ ಹೊರತು ಇದರ ಆಳ-ಅಳವು ಬೇರೆಯೇ ಇದೆ. ತಮ್ಮ ಈ ಕಾದಂಬರಿಯಲ್ಲಿ ಗುರು, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೆಲ್ಲವನ್ನೂ ಅತ್ಯಂತ ತೀಕ್ಷ್ಯವಾಗಿ ನೋಡುತ್ತಿದ್ದಾರೆ ಎಂಬುದೇ ಅತ್ಯಂತ ಪ್ರಮುಖವಾದ ಅಂಶ. ಈ ತೀಕ್ಷ್ಯತೆ, ಈ ನಿರ್ಲಿಪ್ತತೆ, ಈ ಸ್ವ-ವಿಮರ್ಶೆ ಕನ್ನಡದ ಕಾದಂಬರಿ ಲೋಕದಲ್ಲಿ ಮೊದಲು ದರ್ಶನವಾದದ್ದೇ ಶ್ರೀ ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನಲ್ಲಿ, ದಲಿತ ಲೋಕದ 'ಮದುಮಗಳ' ಹುಟ್ಟಿಗೆ ಕಾರಣವಾಗುವಂತಹ ಬೀಜದ ಗುಣವಷ್ಟೇ ಅಲ್ಲ, ಸ್ವತಃ ಬೀಜವೇ ಈ ಕಾದಂಬರಿಯಲ್ಲಿದೆ. ತನ್ನವರ ಬದುಕನ್ನು ದಿಟ್ಟಿಸಿ ಮತ್ತು ಧ್ಯಾನಿಸಿ ನೋಡುವ ಹರಿತ ಕಣ್ಣುಗಳಿರುವ ಗುರು ಈ ಕಾದಂಬರಿಯಲ್ಲಿ ಅನೇಕ ಬಗೆಯ ಗಡಿಗಳನ್ನು ಏಕಕಾಲಕ್ಕೆ ದಾಟಿದ್ದಾರೆ. ಆ ಗಡಿಗಳು ಯಾವುವು ಎಂಬುದನ್ನು ಓದುಗರು ಗುರುತಿಸಿದರೆ ಗುರು ಮಾಡಿರುವ ಈ ಅ-ಸಮ ಸಾಹಸ ಎಷ್ಟು ಉನ್ನತವಾದುದು ಎಂಬುದು ಮನವರಿಕೆಯಾದೀತು. ಆತ್ಮವೃತ್ತಾಂತವನ್ನು ನಿರಾಯಾಸವಾಗಿ ಕಥಿಸುವ ರುಚಿಕಟ್ಟಾದ ನಿರೂಪಣೆಗಿಂತ ಆತ್ಮವಿಮರ್ಶೆಯ ಕಡುಕಷ್ಟದ ದಾರಿಯನ್ನು ಬಯಸಿ ಬಯಸಿ ಆರಿಸಿಕೊಂಡಿರುವ ಗುರು ಈ ಕಾದಂಬರಿಯನ್ನು ಇನ್ನಷ್ಟು ವಿಸ್ತರಿಸಬೇಕೆಂಬುದು ನನ್ನ ಪ್ರೀತಿಯ ಆಗ್ರಹ.
650 _aFiction ಕಾದಂಬರಿ
_9194225
942 _2ddc
_cBK
999 _c233666
_d233666