000 03381nam a2200217Ia 4500
003 OSt
005 20251118113236.0
008 210210b2008 xxu||||| |||| 00| 0 eng d
040 _cAL
041 _aKannada
082 _aK894.9 YASA
100 _aYASHAVANTA CHITTALA
_dಯಶವಂತ ಚಿತ್ತಾಲ
_9165857
245 _aAntahkarana
_bಅಂತಃಕರಣ
260 _aBengaluru
_bKannada Sangha Kraist Kalej
_c2008
300 _ax,156
520 _aಯಶವಂತ ಚಿತ್ತಾಲರ ಮೂರನೆಯ ಪ್ರಬಂಧ ಸಂಕಲನ ’ಅಂತಃಕರಣ’. ಈ ಸಂಕಲನದಲ್ಲಿ ಮೂರು ಭಾಗಗಳಿವೆ. 'ಸಭಾಂಗಣದಲ್ಲಿ’, 'ಓದುವ ಕೋಣೆಯಲ್ಲಿ' ಮತ್ತು 'ಅಂತರಂಗದ ಆಳದಲ್ಲಿ' ಎಂಬ ಭಾಗಗಳಲ್ಲಿ ಒಟ್ಟು ೧೮ ಲೇಖನಗಳಿವೆ. ಮನುಷ್ಯ ಕಟ್ಟಿಕೊಂಡ ಬದುಕು ಹಾಗೂ ಅದನ್ನು ಅರಿಯುವುದಕ್ಕೆ ಸಾಹಿತ್ಯ ಸಹಕಾರಿ ಆಗುವ ಬಗೆಗೆ ಇಲ್ಲಿನ ಲೇಖನಗಳು ಚರ್ಚಿಸುತ್ತವೆ. ಚಿತ್ತಾಲರ ಹಿಂದಿನ ಪ್ರಬಂಧ ಸಂಕಲನಗಳಾದ 'ಸಾಹಿತ್ಯ, ಸೃಜನಶೀಲತೆ ಮತ್ತು ನಾನು' (1981) ಹಾಗೂ 'ಸಾಹಿತ್ಯದ ಸಪ್ತಧಾತುಗಳು' (2000) ಕೃತಿಗಳಲ್ಲಿನ ಚರ್ಚೆಯನ್ನು ಮುಂದುವರೆಸುತ್ತವೆ. ಹಾಗೂ ಕೆಲವು ಮುಖ್ಯ ವಾದಗಳನ್ನು ಸಮರ್ಥವಾಗಿ ಮಂಡಿಸುತ್ತವೆ. ಕೃತಿಯ ಕುರಿತು ವಿಮರ್ಶಕ ಪುರುಷೋತ್ತಮ ಬಿಳಿಮಲೆ ಅವರು ’ಕಲಾಕೃತಿಯೊಂದರ ಅನನ್ಯತೆಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡದ ಚಿತ್ತಾಲರು ಇಲ್ಲಿನ ಎಲ್ಲ ಲೇಖನಗಳಲ್ಲಿ ಮತ್ತೆ ಮತ್ತೆ ಅದರ ಬಗ್ಗೆ ಬರೆಯುತ್ತಾರೆ. ಒಂದು ಮಾಧ್ಯಮ ಇನ್ನೊಂದು ಮಾಧ್ಯಮಕ್ಕೆ ಸೇರಿದ ಕಾರ್ಯವನ್ನು ಕಸಿದುಕೊಳ್ಳುವುದಿಲ್ಲ. ಕಣ್ಣಿಗೆ ಸಾಧ್ಯವಿದ್ದದ್ದು ಮೂಗಿಗೂ ಹೇಗೆ ಸಾಧ್ಯವಾದೀತು, ಸಾಧ್ಯವಿದ್ದಿದ್ದರೆ ನಮಗೇಕೆ ಕಣ್ಣು ಇರುತ್ತಿತ್ತು? (ಪು. 15) ಎಂದು ಪ್ರಶ್ನಿಸುವ ಅವರು, ಭಾಷೆಯ ಮೂಲಕ ಸಾಹಿತ್ಯ ಕೃತಿಗಳಲ್ಲಿ ಈ ಅನನ್ಯತೆ. ಪ್ರತೀತಗೊಳ್ಳುವ ಪರಿಯನ್ನು ತಾಳ್ಮೆಯಿಂದ ವಿವರಿಸುತ್ತಾರೆ. ಹಾಗೆ ವಿವರಿಸುವಾಗ ಸಂಭವಿಸುವ ಈ ಚೋದ್ಯಕ್ಕೆ ತನಗೇ ತಾನೇ ಚಕಿತಗೊಳ್ಳುತ್ತಾರೆ, ಸಂಭ್ರಮಿಸುತ್ತಾರೆ ಮತ್ತು ಕುತೂಹಲಿಯಾಗುತ್ತಾರೆ’ ಎಂದು ವಿಶ್ಲೇಷಿಸಿದ್ದಾರೆ.
650 _aAntahkarana
_9165858
690 _aKannada Criticism
_9165859
906 _a064265
942 _2ddc
_cBK
999 _c140269
_d140269