000 04362nam a2200217Ia 4500
003 OSt
005 20241018093928.0
008 210210b2003 xxu||||| |||| 00| 0 eng d
040 _cAL
041 _aKannada
082 _aK894.308 JAND
100 _aJANARDHANA BHAT (B)
_9119655
_dಜನಾರ್ದನ ಭಟ್ (ಬಿ)
245 _aDakshina kannadada shatamanada kathegalu
_bದಕ್ಷಿಣ ಕನ್ನಡದ ಶತಮಾನದ ಕಥೆಗಳು
260 _aPutturu
_bKarnataka Sangha
_c2003
300 _a628
520 _aಬಿ. ಜನಾರ್ದನ ಭಟ್ ಅವರ ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’ ಕೃತಿಯು ಕಳೆದ ಶತಮಾನದಲ್ಲಿ (1900-2000) ಪ್ರಕಟವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕತೆಗಳ ಸಂಗ್ರಹ. ಈ ಸಂಕಲನದಲ್ಲಿ ಪಂಜೆ ಮಂಗೇಶರಾಯರ “ನನ್ನ ಚಿಕ್ಕ ತಾಯಿ” ಕತೆಯಿಂದ ಆರಂಭಿಸಿ ಜೋಗಿ ಅವರ ‘ಸೀಳು ನಾಲಿಗೆ’ ಕತೆಯವರೆಗೆ ಒಟ್ಟು 59 ಶ್ರೇಷ್ಠ ಸಣ್ಣಕತೆಗಳು 620 ಪುಟಗಳಲ್ಲಿ ಹರಡಿಕೊಂಡಿವೆ ಸಾಹಿತ್ಯದ ಕಣಜವಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕನ್ನಡ ಕುಲಕೋಟಿಯ ಜ್ಞಾನ ಪಚನೇ೦ದ್ರಿಯಗಳಿಗೆ ಸಮೃದ್ದ ಆಹಾರವುಣಿಸಿದ ತವರುನೆಲ. ಅದರಲ್ಲೂ ಕತೆ ಕಟ್ಟುವ ಕುಸುರಿ ಕೆಲಸ ‘ಕುರಿತೋದದ’ ಜನಪದರಿಂದ ತೊಡಗಿ ಇಂದಿನ ‘ನಾಗರಿಕ’ರ ತನಕ ಪ್ರತಿಯೊಬ್ಬರಿಗೂ ಕರಗತ. ಪುರಾಣದ ಕತೆಗಳು ವಿವಿಧ ಪ್ರಕಾರಗಳಾದ ಯಕ್ಷಗಾನ, ಹರಿಕಥೆ, ಕಾವ್ಯವಾಚನ, ಪುರಾಣಗಳ ಮೂಲಕ ಜನತಾವೃಕ್ಷದ ತಾಯಿ ಬೇರಿಗೇ ಹರಿದಿವೆ. ಆ ಮೂಲದ್ರವ್ಯವು ವಿಭಿನ್ನ ನೆಲೆಗಳಲ್ಲಿ, ಸೆಲೆಗಳಲ್ಲಿ ಸಾಮಾಜಿಕ ಬದುಕಿನೊಂದಿಗೆ ಮಿಳಿತಗೊಂಡು ಮರುಜೀವ ಪಡೆಯುತ್ತಲೇ ಇವೆ. ಆದುದರಿಂದಲೇ ಈ ಜಿಲ್ಲೆಯಲ್ಲಿ ಸಣ್ಣ ಕತೆಗಳದು ಹುಲುಸಾದ ಫಸಲು. ಕನ್ನಡ ಸಣ್ಣ ಕತೆಗಳ ಮೂಲಪುರುಷರಾದ ಪಂಜೆಯವರಿಂದ ತೊಡಗಿ ಅಸಂಖ್ಯ ಘನೀಭೂತ ಧಾನ್ಯಗಳು ಇಲ್ಲಿನ ಫಲಭರಿತ ಮಣ್ಣಿನಿಂದ ಪುಟಿದೆದ್ದು ಮೆರಗು ಪಡೆದಿವೆ. ಆ ಧಾನ್ಯರಾಶಿಯಿಂದ ಗಟ್ಟಿ ಬೀಜದ ಐವತ್ತೊಂಬತ್ತನಷ್ಟೇ ಆಯ್ದು ಮರುಬಿತ್ತನೆ ಮಾಡುವ ಸಾಹಸ ಮಾಡಿದ್ದಾರೆ – ಪುತ್ತೂರು ಕರ್ನಾಟಕ ಸಂಘದ ಬೋಳಂತಕೋಡಿ ಈಶ್ವರ ಭಟ್ಟರು. ಕತೆಗಾರರ ಆಯ್ಕೆ ಕಷ್ಟ; ಕತೆಗಳ ಆಯ್ಕೆ ಇನ್ನೂ ಕಷ್ಟ. ಅಂತಹ ಸಂದಿಗ್ಧದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಶತಮಾನದ ಕತೆಗಳು ಬೃಹತ್ ಸಂಪುಟವೊಂದು ಹೊರಬರುತ್ತಿರುವುದು ಸಂಪಾದಕ ಬಿ.ಜನಾರ್ದನ ಭಟ್ಟರ ಅಚಲ ‘ನೇಗಿಲ ಯೋಗಿತ್ವ’ದಿಂದಲೆ. ಇಲ್ಲಿನ ಕತೆಗಳೆಲ್ಲ ವೈವಿಧ್ಯಮಯ. ಜೀವನಾನುಭವದ ಸಾರಸತ್ವ. ಕರಾವಳಿಯ ಸಂಸ್ಕೃತಿಯನ್ನು ಬಿದಿಬಿಡಿಯಾಗಿಯೂ ಆ ಮೂಲಕ ಇಡಿಯಾಗಿಯೂ ಒಂದು ಹಿಡಿಯಾಗಿಯೂ ಕಟ್ಟಿಕೊಡುವ ಗಂಭೀರ ಪ್ರಯತ್ನವಾಗಿ ಈ ಗ್ರಂಥವನ್ನು ಪರಿಭಾವಿಸಬೇಕು.
650 _aSanna kategalu
_9119656
690 _aKannada Fiction
_9119657
906 _a058333
942 _2ddc
_cBK
999 _c105769
_d105769