000 03064nam a2200205Ia 4500
003 OSt
005 20240613154629.0
008 210210b1996 xxu||||| |||| 00| 0 eng d
040 _aAL
_c
041 _aKannada
082 _aK894.3 RAVB
100 _aRAV (K V)
_927529
_d ಕೆ ವಿ ರಾವ್
245 _aBada
_bಬಾಡ
260 _aPutturu
_bKannada Prapancha Prakashana
_c1996
300 _a410
520 _a'ಬಾಡ' ಕಾದಂಬರಿಯ ಎಲ್ಲ ಪುಟಗಳಲ್ಲಿ ದಲಿತರ ಜೀವನದಾರಿದ್ರ ಪುಟಕಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ದಾರಿ, ಈ ದಾರಿ, ನಡು ದಾರಿ, ಹೊಸ ದಾರಿ- ಎಂಬ ನಾಲ್ಕು ಅಧ್ಯಾಯಗಳು ದಲಿತರ ಬದುಕಿನ ಸಾಂಕೇತಿಕ ಅಭಿವ್ಯಕ್ತಿ. ಅವರ ಒಟ್ಟು ಇರವು ಮತ್ತು ಹೋರಾಟ, ಹೋರಾಟದಿಂದಲೇ ಒಂದು ಜೀವನ ರೂಪುಗೊಳ್ಳುವ ಬಗೆ- ಇದನ್ನು ಬಹಳ ಖಚಿತವಾದ ರೀತಿಯಲ್ಲಿ ಹೇಳಿದ್ದೀರಿ. ಕನ್ನಡದಲ್ಲಿ ಈ ರೀತಿಯಾಗಿ ದಲಿತರ ಬಗ್ಗೆ ಇಷ್ಟೊಂದು ಬೃಹತ್ ಪ್ರಮಾಣದ ಕೃತಿ. ಬಂದಿಲ್ಲ. ದೇವನೂರು, ಅರವಿಂದ ಮಾಲಗತ್ತಿ, ಮ. ನ. ಜವರಯ್ಯನವರ ಬರಹಗಳು ಪ್ರಭಾವಶಾಲಿಯಾಗಿದ್ದರೂ ತುಂಬ ಚಿಕ್ಕವು. ಯಾವುದೋ ಒಂದು ಘಟನೆಯ ಅನಾವರಣಕ್ಕೆ ಸೀಮಿತವಾಗಿವೆ. '' ಅಂಥ ಕೃತಿಯಲ್ಲ. ಇದರ ವಿಸ್ತಾರವೇ ಆಶ್ಚರ್ಯ ಹುಟ್ಟಿಸುತ್ತದೆ. ಮೂರು ತಲೆಮಾರಿನ ಜನ ಪಾತ್ರಗಳಾಗುತ್ತಾರೆ. ಕಾರಂತರು 'ಮರಳಿ ಮಣ್ಣಿಗೆ'ಯಲ್ಲಿ ಮೂರು ತಲೆಮಾರಿನ ಬ್ರಾಹ್ಮಣ ಮನೆತನದ ಚಿತ್ರವನ್ನು ಬಹಳ ಸೊಗಸಾಗಿ ನೀಡಿದ್ದಾರೆ. ನೀವು ದಲಿತರ ಜೀವನಕ್ರಮ ವನ್ನು ಹಿಡಿದಿಟ್ಟಿದ್ದೀರಿ. ಮೂರ್ತಿಹೇಳುವ ಹಾಗೆ 'ಸುಂದರಂನ ಯಾಂತ್ರೀಕರಣ, ನಿನ್ನ ವೈಜ್ಞಾನೀಕರಣ ಅಂದಾಗ ಬಡ ಮಜೂರರು ದಾರಿಗೆ ಬೀಳುತ್ತಾರೆ; ಸಾಯುತ್ತಾರೆ' ಎಂಬಂಥ ಆಧುನಿಕ ಧೋರಣೆಯೂ 'ಬಾಡ'ದಲ್ಲಿ ಕೆಲಸಮಾಡಿರುವುದರಿಂದ, ವಸ್ತು ಮತ್ತು ಹರಹುವಿನ ದೃಷ್ಟಿಯಿಂದ ಇದೊಂದು ದೊಡ್ಡ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. - ಡಾ| ಪುರುಷೋತ್ತಮ ಬಿಳಿಮಲೆ
690 _aKannada Fiction
_927530
906 _a052082
942 _2ddc
_cBK
999 _c100665
_d100665