Local cover image
Local cover image
Image from Google Jackets

Kuvempu sahitya loka samputa 4 : ಕುವೆಂಪು ಸಾಹಿತ್ಯ ಲೋಕಸಂಪುಟ ೪

By: Material type: TextTextLanguage: Kannada Series: Vol 4Publication details: Bengaluru C V G Publications 2016Description: xviii,374pSubject(s): DDC classification:
  • K894.9 RAJK
Summary: ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ನೀಡಿದ ಕೊಡುಗೆ ಅಪಾರ. ಕುವೆಂಪು ಅವರ ಬರಹಗಳಿಗೆ ಸಂಬಂಧಿಸಿದಂತೆ ಕುವೆಂಪು ಸಾಹಿತ್ಯ ಲೋಕ ಕೃತಿಯು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಈ ಕೃತಿಯಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯ ಕುರಿತು ವಿಶ್ಲೇಷಣೆಗಳು ಇದ್ದು ದೇ. ಜವರೇಗೌಡರು ಬರೆದಿರುವ ಪಂಪ ಪ್ರಶಸ್ತಿಯ ಕುವೆಂಪು ಲೇಖನ, ಹಾ.ಮಾ. ನಾಯಕ ಅವರ ಕನ್ನಡದಲ್ಲಿ ರಾಮಾಯಣ, ಡಿ.ಕೆ. ರಾಜೇಂದ್ರ ಅವರ ಶ್ರೀ ರಾಮಾಯಣ ದರ್ಶನಂ ಮತ್ತು ಜನಪದ ರಾಮಾಯಣಗಳು ಮುಂತಾದವರ ವಿಶ್ಲೇಷಣಾತ್ಮಕ ಲೇಖನಗಳು ಈ ಕೃತಿಯಲ್ಲಿವೆ. ಶ್ರೀಮದ್ರಾಮಾಯಣ, ಮಹಾಭಾರತ, ಭಾಗವತಗಳು ಆದಿ ಅಂತ್ಯವಿಲ್ಲದ ಚಿರಂತನ ಕೃತಿಗಳು: ಅವು ಪರಬ್ರಹ್ಮನ ಪ್ರತಿಬಿಂಬಗಳು ಮಾತ್ರವಲ್ಲ, ಪರಬ್ರಹ್ಮ ಸ್ವರೂಪಿಗಳೆಂದರೂ ಸಲ್ಲುತ್ತದೆ. ಇವು ವಿಶ್ವದ ವಿಕಾಸದಂತೆ ಅನವರತ ವಿಕಾಸ ಮುಖಿಯಾಗಿವೆ. ಮಾನವ ವಿಕಾಸದ ಮಹಾಯಾತ್ರೆಯ ವಿಕ್ರಮಗಳನ್ನಿಲ್ಲಿ ಗುರುತಿಸಬಹುದು. ಅಧಿಮಾನಸಕ್ಕೇರಿದ ವಿಶ್ವಪುರುಷನ, ಪುರುಷೋತ್ತಮನ, ಪರಾತ್ಪರ ವಸ್ತುವಿನ ಪರಿಪೂರ್ಣಾಭಿವ್ಯಕ್ತಿಯವರೆಗಿನ ಮಾನವನ ವಿಕಾಸ ರಾಮಕಥೆಯ ವಿಕಾಸದಲ್ಲಿ ಮೇಳೆಸಿದೆಯೆಂದರೆ ಆಶ್ಚರ್ಯವಾಗದು. ಆದ್ದರಿಂದಲೇ ರಾಮಾಯಣ ನಿತ್ಯ ರಾಮಾಯಣವೆಂದು ಕರೆಸಿಕೊಳ್ಳುತ್ತಿದೆ. ದೇ. ಜವರೇಗೌಡರು ಕುವೆಂಪು ಅವರ ಸಾಹಿತ್ಯ ಕೃಷಿ ಅದರಲ್ಲೂ ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಬಗ್ಗೆ ಬರೆಯುತ್ತಾ, ’ಪ್ರಾಯಶಃ ಬೈಬಲ್ ಹೊರತಾಗಿ, ಜಗತ್ತಿನ ಯಾವ ಪವಿತ್ರಗ್ರಂಥವೇ ಆಗಲಿ, ಪುರಾಣೇತಿಹಾಸಗಳೇ ಆಗಲಿ ಮೇಲ್ಕಂಡ ಭಾರತೀಯ ಗ್ರಂಥಗಳಷ್ಟು ವ್ಯಾಪಕವಾಗಿ ಕಾಲಾತೀತವಾಗಿ, ಆಯಾಯ ಸಮಾಜಗಳ ಮೇಲೆ ಪ್ರಭಾವ ಬೀರಿದಂತಿಲ್ಲ. ಇಲಿಯಡ್ ಈನಿಯಡ್ ಷಹನಾಮಾದಿ ಮಹಾಕಾವ್ಯಗಳು ಆಯಾಯ ದೇಶಗಳಲ್ಲಿ ಗ್ರಂಥಾಲಯಗಳ ಕಪಾಟಗಳಲ್ಲುಳಿದಿವೆಯೇ ಹೊರತು, ಅಲ್ಲಿಯ ಜನರ ಬದುಕಿನಲ್ಲಿ ಒಂದಾಗಿಲ್ಲ; ಅಂದರೆ ಅವು ರಾಮಾಯಣದಂತೆ ನಿಚ್ಚಹಸುರಾಗಿರುವ, ಜೀವಂತ ಗ್ರಂಥಗಳಾಗಿ ಉಳಿದಿಲ್ಲ ರಾಮಾಯಣ ಭಾರತ ಭಾಗವತಗಳನ್ನಾಧರಿಸಿದ ಸಾಹಿತ್ಯ ಕೃತಿಗಳು ಅಂದಿನಿಂದ ಇಂದಿನವರೆಗೆ ಸಂಖ್ಯಾಪ್ರಮಾಣ ಗುಣಗಾತ್ರಗಳಲ್ಲಿ ವಿಪುಲವಾಗಿ ಬೆಳೆದಿರುವಂತೆ, ಮುಂದೆ ಬೆಳೆಯುವಂತೆ ಜಗತ್ತಿನ ಇತರ ಮಹಾ ಕಾವ್ಯಗಳನ್ನಾಧರಿಸಿದ ಗ್ರಂಥಗಳು ಬೆಳೆಯುತ್ತಿಲ್ಲ, ಮುಂದೆ ಬೆಳೆಯುವಂತಿಲ್ಲ’ ಎಂದಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Reference Reference St Aloysius Library Reference Section Kannada K894.9 RAJK (Browse shelf(Opens below)) Reference Book 071613
Total holds: 0

ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ನೀಡಿದ ಕೊಡುಗೆ ಅಪಾರ. ಕುವೆಂಪು ಅವರ ಬರಹಗಳಿಗೆ ಸಂಬಂಧಿಸಿದಂತೆ ಕುವೆಂಪು ಸಾಹಿತ್ಯ ಲೋಕ ಕೃತಿಯು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಈ ಕೃತಿಯಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯ ಕುರಿತು ವಿಶ್ಲೇಷಣೆಗಳು ಇದ್ದು ದೇ. ಜವರೇಗೌಡರು ಬರೆದಿರುವ ಪಂಪ ಪ್ರಶಸ್ತಿಯ ಕುವೆಂಪು ಲೇಖನ, ಹಾ.ಮಾ. ನಾಯಕ ಅವರ ಕನ್ನಡದಲ್ಲಿ ರಾಮಾಯಣ, ಡಿ.ಕೆ. ರಾಜೇಂದ್ರ ಅವರ ಶ್ರೀ ರಾಮಾಯಣ ದರ್ಶನಂ ಮತ್ತು ಜನಪದ ರಾಮಾಯಣಗಳು ಮುಂತಾದವರ ವಿಶ್ಲೇಷಣಾತ್ಮಕ ಲೇಖನಗಳು ಈ ಕೃತಿಯಲ್ಲಿವೆ.



ಶ್ರೀಮದ್ರಾಮಾಯಣ, ಮಹಾಭಾರತ, ಭಾಗವತಗಳು ಆದಿ ಅಂತ್ಯವಿಲ್ಲದ ಚಿರಂತನ ಕೃತಿಗಳು: ಅವು ಪರಬ್ರಹ್ಮನ ಪ್ರತಿಬಿಂಬಗಳು ಮಾತ್ರವಲ್ಲ, ಪರಬ್ರಹ್ಮ ಸ್ವರೂಪಿಗಳೆಂದರೂ ಸಲ್ಲುತ್ತದೆ. ಇವು ವಿಶ್ವದ ವಿಕಾಸದಂತೆ ಅನವರತ ವಿಕಾಸ ಮುಖಿಯಾಗಿವೆ. ಮಾನವ ವಿಕಾಸದ ಮಹಾಯಾತ್ರೆಯ ವಿಕ್ರಮಗಳನ್ನಿಲ್ಲಿ ಗುರುತಿಸಬಹುದು. ಅಧಿಮಾನಸಕ್ಕೇರಿದ ವಿಶ್ವಪುರುಷನ, ಪುರುಷೋತ್ತಮನ, ಪರಾತ್ಪರ ವಸ್ತುವಿನ ಪರಿಪೂರ್ಣಾಭಿವ್ಯಕ್ತಿಯವರೆಗಿನ ಮಾನವನ ವಿಕಾಸ ರಾಮಕಥೆಯ ವಿಕಾಸದಲ್ಲಿ ಮೇಳೆಸಿದೆಯೆಂದರೆ ಆಶ್ಚರ್ಯವಾಗದು. ಆದ್ದರಿಂದಲೇ ರಾಮಾಯಣ ನಿತ್ಯ ರಾಮಾಯಣವೆಂದು ಕರೆಸಿಕೊಳ್ಳುತ್ತಿದೆ.

ದೇ. ಜವರೇಗೌಡರು ಕುವೆಂಪು ಅವರ ಸಾಹಿತ್ಯ ಕೃಷಿ ಅದರಲ್ಲೂ ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಬಗ್ಗೆ ಬರೆಯುತ್ತಾ, ’ಪ್ರಾಯಶಃ ಬೈಬಲ್ ಹೊರತಾಗಿ, ಜಗತ್ತಿನ ಯಾವ ಪವಿತ್ರಗ್ರಂಥವೇ ಆಗಲಿ, ಪುರಾಣೇತಿಹಾಸಗಳೇ ಆಗಲಿ ಮೇಲ್ಕಂಡ ಭಾರತೀಯ ಗ್ರಂಥಗಳಷ್ಟು ವ್ಯಾಪಕವಾಗಿ ಕಾಲಾತೀತವಾಗಿ, ಆಯಾಯ ಸಮಾಜಗಳ ಮೇಲೆ ಪ್ರಭಾವ ಬೀರಿದಂತಿಲ್ಲ. ಇಲಿಯಡ್ ಈನಿಯಡ್ ಷಹನಾಮಾದಿ ಮಹಾಕಾವ್ಯಗಳು ಆಯಾಯ ದೇಶಗಳಲ್ಲಿ ಗ್ರಂಥಾಲಯಗಳ ಕಪಾಟಗಳಲ್ಲುಳಿದಿವೆಯೇ ಹೊರತು, ಅಲ್ಲಿಯ ಜನರ ಬದುಕಿನಲ್ಲಿ ಒಂದಾಗಿಲ್ಲ; ಅಂದರೆ ಅವು ರಾಮಾಯಣದಂತೆ ನಿಚ್ಚಹಸುರಾಗಿರುವ, ಜೀವಂತ ಗ್ರಂಥಗಳಾಗಿ ಉಳಿದಿಲ್ಲ ರಾಮಾಯಣ ಭಾರತ ಭಾಗವತಗಳನ್ನಾಧರಿಸಿದ ಸಾಹಿತ್ಯ ಕೃತಿಗಳು ಅಂದಿನಿಂದ ಇಂದಿನವರೆಗೆ ಸಂಖ್ಯಾಪ್ರಮಾಣ ಗುಣಗಾತ್ರಗಳಲ್ಲಿ ವಿಪುಲವಾಗಿ ಬೆಳೆದಿರುವಂತೆ, ಮುಂದೆ ಬೆಳೆಯುವಂತೆ ಜಗತ್ತಿನ ಇತರ ಮಹಾ ಕಾವ್ಯಗಳನ್ನಾಧರಿಸಿದ ಗ್ರಂಥಗಳು ಬೆಳೆಯುತ್ತಿಲ್ಲ, ಮುಂದೆ ಬೆಳೆಯುವಂತಿಲ್ಲ’ ಎಂದಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image