TY - BOOK AU - JAVAREGAUDA (De) & others, Ed. TI - Janapriya Kanaka samputa: ಜನಪ್ರಿಯ ಕನಕ ಸಂಪುಟ U1 - K894.1 JAVJ PY - 1989/// CY - Bengaluru PB - Kannada mattu Samskrati Nirdeshanalaya N2 - ವರಕವಿಗಳೂ, ಕೀರ್ತನಕಾರರೂ, ಸಂತರೂ ಎನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನೀಜೀವತೆಗಳಲ್ಲೊ ಬ್ಬರು. ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರಲ್ಲೊಬ್ಬರಾಗಿ, ಯಾವ ಮತವನ್ನೂ ಬಿಡದೆ, ಯಾವ ಮತಕ್ಕೂ ಅಂಟಿಕೊಳ್ಳದೆ, ಸಕಲ ತತ್ವಗಳನ್ನೂ ಮಾರಿ, ನಿರ್ದಿಗಂತವಾಗಿ “ಬೆಳೆದು, ವಿಶ್ವಮಾನವರಾಗಿ ವಿಜೃಂಭಿಸಿದ ಯೋಗ ಪುರುಷರವರು. ದಲಿತ ವರ್ಗಕ್ಕೆ ದಾಖಲೆಗೊಳ್ಳ ಬಹುದಾದ ಕುರುಬರ ಜಾತಿಯಲ್ಲಿ ಹುಟ್ಟದವರಾದರೂ, 'ಧರ್ಮಕರ್ಮ ಸಂಯೋಗದಿಂಜಿಂಬಂತೆ ನಾಯಕತನದ ಪಟ್ಟವಣೆಯನ್ನೇರಿ, ಅರಿಗಳೊಡನೆ ಹೋರಾಡಿ, ಶೌರ್ಯ ಪ್ರತಾಪ ಸಾಹಸಗಳನ್ನು ಮೆರೆದ ವೀರಾಗ್ರಣಿ ಯವರು ; ಕೊನೆಗೆ ಕುಟುಂಬದಲ್ಲೊದಗಿದ ವಿರಾಶೆಯೋ, ದುರಂತನೋ, ಯುದ್ಧ ದಲ್ಲಿ ಕಣ್ಣಾರೆ ಕಂಡ ಹೃದಯವಿದ್ರಾವಕವಾದ ಸಾವುನೋವೋ, ಗುರುಗಳ ಕರೆಯೋ, ವಿಶ್ವಶಕ್ತಿಯ ಪ್ರೇರಣೆಯೋ ಕಾರಣವಾಗಿ, ದೊರೆತನವನ್ನು ತೊರೆದು, ಸಂಸಾರವನ್ನು ತ್ಯಜಿಸಿ, ಗುರುಸೇವೆಯಲ್ಲಿ ಕೃತಕೃತ್ಯರಾಗಿ, ಹರಿದಾಸರ ಸಂಸರ್ಗ 'ದಿಂದ ಧನ್ಯರಾಗಿ, ಭೇದರಹಿತ ತತ್ಪೋಪಾಸಕರಾಗಿ ಆಧ್ಯಾತ್ಮ ಸಿದ್ಧಿಯ ಶಿಖರ ವನ್ನೇರಿದ ಮಹಾಯೋಗಿ, ವೈರಾಗ್ಯ ಶಿಖಾಮಣಿಯವರು ER -