“ಕಿರಗೂರಿನ ಗಯ್ಯಾಳಿಗಳು” ತೇಜಸ್ವಿ ಯವರ ಹಾಸ್ಯಮಿಶ್ರಿತ ಹಾಗೂ ಸೊಗಸಾದ ಒಂದು ಮಲೆನಾಡಿನ ಕಥೆ. ಈ ಕಥೆಯಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ನಮ್ಮ ಜೀವನದಲ್ಲಿ ಎಲ್ಲೋ ಬಂದು ಹೋದ ಅಥವಾ ನೋಡಿದ ಥರ ಅನ್ನಿಸುತ್ತೆ. ಇದರಲ್ಲಿ ಕಿರಿಗೂರಿನ ಹೆಂಗಸರು ಬಗಣಿಗೂಟ ಕಿತ್ತು ಹೊಡೆಯುವ, ಬಯ್ಯುವ ಸನ್ನಿವೇಶಗಳಂತೂ ತುಂಬಾ ಮುದ ಕೊಡುತ್ತದೆ. ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ