ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು ದಕ್ಷಿಣ ಕನ್ನಡ. ಇನ್ನೊಂದು ಉತ್ತರ ಕನ್ನಡ. ಇವೆರಡೂ ಜಿಲ್ಲೆಗಳು ಈಗ ಪ್ರತ್ಯೇಕವಾಗಿದ್ದರೂ ಕ್ರಿ. ಶ. 1861ರ ಮೊದಲು ಇವು ಒಂದೇ ರಾಜಕೀಯ ಘಟಕವಾಗಿದ್ದುವು. ಕ್ರಿ. ಶ. 1861ರ ನಂತರ ಉತ್ತರ ಕನ್ನಡ ಜಿಲ್ಲೆಯು ಬೊಂಬಾಯಿ ಆಧಿ ಪತ್ಯಕ್ಕೆ ಸೇರಿಸಲ್ಪಟ್ಟಿತು. ದಕ್ಷಿಣ ಕನ್ನಡ ಜಿಲ್ಲೆಯು ಮದ್ರಾಸು ಆಧಿ ಪತ್ಯಕ್ಕೆ ಸೇರಿಸಲ್ಪಟ್ಟಿತು. ಭಾಷಾವಾರು ಪ್ರಾಂತ್ಯ ರಚನೆಯಾದೊಡನೆ ಇವೆರಡೂ ಜಿಲ್ಲೆಗಳು ಕರ್ನಾಟಕ ರಾಜ್ಯಕ್ಕೆ ಸೇರಿಕೊಂಡವು. ಇತಿಹಾಸ ಕಾಲದಲ್ಲಿ ಎಂದರೆ ಹಲವು ಶತಮಾನಗಳ ಹಿಂದೆ ಈ ಕರಾವಳಿ ಪ್ರದೇಶವು ಕರ್ನಾಟಕದ ಇತಿಹಾಸದಲ್ಲಿ ಗಣನೀಯವಾದ ಪಾತ್ರವನ್ನು ವಹಿಸಿದ್ದಿತು. ಐತಿಹಾಸಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡೆಂದೂ, ಆಳ್ವಖೇಡ ವೆಂದೂ ಹೆಸರಿದ್ದಿತು. ಆದರೆ ತುಳುನಾಡಾಗಲೀ, ಆಳ್ವಖೇಡವಾಗಲೀ ಉಚ್ಛಾಯ ಸ್ಥಿತಿಯಲ್ಲಿ ಬರೇ ದಕ್ಷಿಣ ಕನ್ನಡಕ್ಕೆ ಸೀಮಿತವಾಗಿರಲಿಲ್ಲ. ಉತ್ತರ ಕನ್ನಡದ ಅಗಲ ಕಿರಿದಾದ ಕರಾವಳಿ ಪ್ರದೇಶವನ್ನೂ ಪಶ್ಚಿಮ ಘಟ್ಟ ಗಳ ಮೇಲಣ ಕೆಲವು ಪ್ರದೇಶಗಳನ್ನೂ ಸೇರಿಕೊಂಡಿತ್ತು. ವಿಶಾಲ ಕರ್ನಾಟಕ ದೊಡನೆ ತುಲನಾತ್ಮಕ ದೃಷ್ಟಿಯಿಂದ ವಿಸ್ತಾರದಲ್ಲಿ ತುಳುನಾಡನ್ನಾಗಲೀ ಆಳ್ವಖೇಡವನ್ನಾಗಲೀ ಪರಿಶೀಲಿಸಿದಾಗ ಈ ಪ್ರದೇಶ ಗಣನೀಯವೆನ್ನು ವಂತಿರಲಿಲ್ಲ. ಆದರೆ ಈ ಪ್ರದೇಶದ ಜನಜೀವನ, ಸಂಸ್ಕೃತಿ, ಧರ್ಮವೈಶಿಷ್ಟ್ಯ ಹಾಗೂ ಕ್ರಿಯಾಶೀಲತೆಗಳನ್ನು ಪರಿಶೀಲಿಸಿದಾಗ, ಕ್ಷೇತ್ರ ಸೀಮಿತವಾಗಿದ್ದರೂ ಚರಿತ್ರೆ, ವೈಶಿಷ್ಟ್ಯಪೂರ್ಣವಾಗಿತ್ತು ಎಂಬುದರ ಅರಿವಾಗದಿರದು.
ALUPARASARU-Monograph on Alupa dynasty written for children South Canara/South Kanara