ಕೆದಂಬಾಡಿ ಜತ್ತಪ್ಪ ರೈ ಅವರ ಕೃತಿ -ಈಡೊಂದು ಹುಲಿಯೆರಡು. ಇವರ ಬೇಟೆಯ ನೆನಪುಗಳು ’ ಹೆಚ್ಚು ಓದುಗರನ್ನು ಪಡೆದ ಕೃತಿ. ಅದೇ ಧಾಟಿಯಲ್ಲಿ ಬೇಟೆಯ ನೆನಪುಗಳನ್ನುಇಲ್ಲಿ ದಾಖಲಿಸಿದ್ದು ಮಾತ್ರವಲ್ಲ; ಬೇಟೆಯ ವ್ಯಸನದ ಕ್ರೌರ್ಯವನ್ನೂ ಹಾಗೂ ಸುಮಾರು 4-5 ದಶಕಗಳ ಹಿಂದೆ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣವನ್ನೂ ನೀಡುತ್ತದೆ. ಒಂದು ಸೀಮೆಯ ಜನರ ನಡಾವಳಿಕೆ, ಆಲೋಚನೆ ಇತ್ಯಾದಿ ಅಕ್ಷರ ರೂಪದಲ್ಲಿ ಹಿಡಿದಿಡುವ ಲೇಖಕರ ಕುಶಲತೆ ಈ ಕೃತಿಯ ಹೆಚ್ಚುಗಾರಿಕೆ.
ಅನುಕ್ರಮಣಿಕೆ ೧. ಈಡೊಂದು ಹುಲಿಯೆರಡು ೨. ಬೋನಿನಲ್ಲಿ ಹುಲಿ ೩. ಕುದುರೆಮುಖದಲ್ಲಿ ಕರಡಿ ಶಿಕಾರಿ ೪. ಬೇಟೆ ಯಾರದೊ? ಊಟನಾರಿಗೊ? ೫. ಈಡು ಕಾಡುಕೋಣನಿಗೆ ಬಿದ್ದುದು ಊರೆಮ್ಮೆ ೬. ಹಂದಿಯಲ್ಲ. ಕಲ್ಲಾನೆ! ೭. ಜಾದುಗಾರನೊಂದಿಗೆ.... ೮. ನೀರ ಬೇಟೆ ನಿಜವೇ? ೯. ಹೋದದ್ದು ಹುಲಿ ಹೊಡೆಯಲು; ಕಾದದ್ದು ಹೆಣ; ದೊರೆತದ್ದು? ೧೦. ಕಾಕತಾಲ ನ್ಯಾಯ! ೧೧. ರೈಗಳು ಹುಲಿ ಹೊಡೆದರು - ಹುಲಿ? ೧೨. ಒಂಟಿ ಸಲಗದೊಂದಿಗೆ ಸರಸ ೧೩. ಬೇಟೆಯ ಜೀವನಕ್ಕೆ ಇತಿಶ್ರೀ