ಕಲಾವಿದನೊಬ್ಬನ ಬಾಳ ಕತೆ ಇದು. ಕನ್ನಡ ಕಾದಂಬರಿ ಲೋಕ ದಲ್ಲಿ ಕಲಾವಿದನ ಬಗ್ಗೆ ಇರುವ ಕಾದಂಬರಿಗಳ ಸಂಖ್ಯೆ ಕಡಿಮೆಯೇನೂ ಅಲ್ಲ. ಬಹುಶಃ ಮತ್ತಷ್ಟು ಕಾದಂಬರಿಗಳು ಬಂದರೂ ಕಲಾವಿದನ ಜೀವನದಲ್ಲಿಯ ವೈಚಿತ್ರ ಇನ್ನೂ ಉಳಿದೇ ಇರುತ್ತದೆ. ತನ್ನ ಬಾಳ್ವೆಗಿಂತಲೂ ಹಿರಿದಾದ ಅದ್ಭುತ ಸಾಧನೆಯನ್ನೇ ತನ್ನ ಜೀವನದ ಧೈಯವಾಗಿಸಿಕೊಂಡು, ಯೋಗಿ ಯಾಗಿ ಬಾಳು ಸಾಗಿಸುವವನ ಜೀವನದಲ್ಲಿ ಭಾವ, ರಸ, ಲಾಲಿತ್ಯ ಮತ್ತು ಕೌತೂಹಲಗಳಿಗೆ ಕೊರತೆ ಎಂದು ತಾನೇ ಬರಬಲ್ಲದು? ಕಲಾವಿದನ ಹೃದಯ ವೇದನೆಯನ್ನು, ಅವನಲ್ಲಿಯ ಭಾವ ತುಮುಲವನ್ನು, ಕಲ್ಪನಾ ಪ್ರವಾಹವನ್ನು ಚಿತ್ರಿಸಲು ನಡೆಸಿರುವ ಪ್ರಯತ್ನಗಳಲ್ಲಿ ಇದೂ ಒಂದು.