K V Narayana ಕೆ ವಿ ನಾರಾಯಣ

Beru kaanda chiguru : ಬೇರು ಕಾಂಡ ಚಿಗುರು - Bengaluru Amulya Pustaka 2025 - xviii,401p PB 21.5x14cm

ಸಾಹಿತ್ಯ ವಿಮರ್ಶೆ ಅನ್ನುವುದು ಮೂಲತಃ ಕೃತಿ ಕೇಂದ್ರಿತವಾದ ಒಂದು ಬೌದ್ಧಿಕ ಸಂವಾದ ಅನ್ನುವುದನ್ನು ಡಾ. ಕೆ.ವಿ. ನಾರಾಯಣ ಅವರ ಈ ಬರೆಹಗಳು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಹೊರಗಿನಿಂದ ಎರವಲು ತಂದ ಮಾದರಿಗಳ ಸ್ಪಷ್ಟವಾದ ನಿರಾಕರಣೆ, ಮತ್ತು ಸಾಹಿತ್ಯದ ಚರ್ಚೆಗೆ ಅಗತ್ಯವಾದ ವೈಚಾರಿಕ ಪರಿಕರಗಳು ಕೃತಿಯ ಒಡಲೊಳಗೇ ಅಂತರ್ಗತವಾಗಿವೆ ಎಂಬ ತಿಳುವಳಿಕೆ ಹಾಗೂ ಈ ಬಗೆಯ ತಿಳುವಳಿಕೆಯಿಂದಲೇ ಸಾಹಿತ್ಯ ಕೃತಿಯೊಳಗೆ ವ್ಯಕ್ತವಾಗಿರುವ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಲು ಸಾಧ್ಯ ಎಂಬ ಗ್ರಹಿಕೆ - ಈ ಮೂರೂ ಈ ಸಂವಾದದ ನೆಲೆಯಾಗಿವೆ. 'ಈ ದೃಷ್ಟಿಯಿಂದಲೇ ಡಾ. ನಾರಾಯಣ ಅವರ ವಿಮರ್ಶಾ ಕ್ರಮವು ಸಮಕಾಲೀನ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ವಿಭಿನ್ನವೂ, ವಿಶಿಷ್ಟವೂ, ಪ್ರಸ್ತುತವೂ ಆಗಿ ತೋರುತ್ತದೆ. ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ, ಪರಂಪರೆಯ ಪ್ರಜ್ಞೆ ಇತ್ಯಾದಿಗಳಿಂದ ಪರಿಣತವಾದ ಮನಸ್ಸೆಂದು, ಸಾಹಿತ್ಯ ಕೃತಿಗಳನ್ನೂ, ಪ್ರಕಾರಗಳನ್ನೂ ಪರಿಕಲ್ಪನೆಗಳನ್ನೂ ಹಾಗೂ ಸಾಹಿತ್ಯಕ ವಾಗ್ವಾದಗಳನ್ನೂ ಕುರಿತು ಜಿಜ್ಞಾಸೆಗೆ ಒಳಗು ಪಡಿಸಿದ ಚಿಂತನಾ ಕ್ರಮವೊಂದನ್ನು ಇಲ್ಲಿ ಗುರುತಿಸಬಹುದು. ಅಭಿವ್ಯಕ್ತಿಯೊಳಗಣ ಖಚಿತತೆ, ಅಹಂ ನಿರಸನದ ವಿನಯ, ಸತ್ಯಪರವಾದ ದಿಟ್ಟತನ, ಸೂಕ್ಷ್ಮವೂ ಅತ್ಯಂತ ತರ್ಕಬದ್ಧವೂ ಆದ ವಿಶ್ಲೇಷಣೆ ಮತ್ತು ಚಕಿತಗೊಳಿಸುವ ಒಳನೋಟಗಳು- ಈ ಕೆಲವು ಲಕ್ಷಣಗಳಿಂದ ಡಾ. ನಾರಾಯಣ ಅವರ ಈ ಬರೆಹಗಳು ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಬುದ್ಧತೆಗೆ ಸಾಕ್ಷಿಯಾಗಿವೆ. -ಜಿ.ಎಸ್. ಶಿವರುದ್ರಪ್ಪ

9788199060296


Kannada Prose

K894.4 / NARB