<?xml version="1.0" encoding="UTF-8"?>
<mods xmlns:xsi="http://www.w3.org/2001/XMLSchema-instance" xmlns="http://www.loc.gov/mods/v3" version="3.1" xsi:schemaLocation="http://www.loc.gov/mods/v3 http://www.loc.gov/standards/mods/v3/mods-3-1.xsd">
  <titleInfo>
    <title>Shatamanada kannada sahitya : sameeksha samputa 2</title>
    <subTitle>: ಶತಮಾನದ ಕನ್ನಡ ಸಾಹಿತ್ಯ ಸಮೀಕ್ಷಾ ಸಂಪುಟ ೨</subTitle>
  </titleInfo>
  <name type="personal">
    <namePart>G H Nayaka Ed</namePart>
    <role>
      <roleTerm authority="marcrelator" type="text">creator</roleTerm>
    </role>
  </name>
  <name type="personal">
    <namePart/>
    <namePart type="date">ಜಿ ಎಚ್ ನಾಯಕ Ed</namePart>
    <role>
      <roleTerm authority="marcrelator" type="text">creator</roleTerm>
    </role>
  </name>
  <typeOfResource>text</typeOfResource>
  <originInfo>
    <place>
      <placeTerm type="text">Bengaluru</placeTerm>
    </place>
    <publisher>Abhinava</publisher>
    <dateIssued>2023</dateIssued>
    <issuance>monographic</issuance>
  </originInfo>
  <language>
    <languageTerm authority="iso639-2b" type="code">eng</languageTerm>
  </language>
  <language>
    <languageTerm authority="iso639-2b" type="code">kan</languageTerm>
  </language>
  <physicalDescription>
    <form authority="marcform">print</form>
    <extent>468p PB 21x14cm</extent>
  </physicalDescription>
  <abstract>ಹಿಂದಣ ಹೆಜ್ಜೆಯನರಿತಲ್ಲದೆ ನಿಂದ ಹೆಜ್ಜೆಯನರಿಯಲು ಬಾರದು' ಎಂದಿದ್ದಾನೆ ಅಲ್ಲಮಪ್ರಭು. ಕನ್ನಡ ಸಾಹಿತ್ಯ ಕ್ಷೇತ್ರ, ಅದರಲ್ಲೂ ವಿಶೇಷವಾಗಿ ನಡುಗನ್ನಡ ಸಾಹಿತ್ಯಕಾಲದ ಬಳಿಕ ಹತ್ತೊಂಬತ್ತನೆಯ ಶತಮಾನದ ಉತ್ತರ ಭಾಗದಲ್ಲಿ ಹೊಸಕಾಲದ ಮುಂಜಾವಿನ ಪಲುಕುಗಳನ್ನು ಉಲಿಯಲಾರಂಭಿಸಿದ ಹೊಸಗನ್ನಡ ಸಾಹಿತ್ಯ ಕ್ಷೇತ್ರ, ಮುಂದಿನ ದಶಕಗಳಲ್ಲಿ ಅನೇಕ ಬಗೆಯ ಪ್ರಯೋಗಗಳಿಗೆ, ಆಂದೋಲನಗಳಿಗೆ, ಹೊಸ ಹೊಸ ಅಭಿವ್ಯಕ್ತಿ ತಂತ್ರಗಳ ಆವಿಷ್ಕಾರಗಳಿಗೆ, ಚಿಂತನ-ಮಂಥನ ಸಾಧ್ಯತೆಗಳಿಗೆ, ಅದಾನ- ಪ್ರದಾನ ಕುರಿತ ಅನೇಕ ಹೊರಳು ದಾರಿಗಳಿಗೆ ಮುಕ್ತದ್ವಾರಗಳನ್ನು ಸೃಷ್ಟಿಸಿಕೊಟ್ಟಿರುವುದನ್ನು ಅವಲೋಕಿಸಿದರೆ ಸಾಹಿತ್ಯ ಪ್ರೇಮಿಗಳಿಗೆ ಹೆಮ್ಮೆಯಾಗದೆ ಇರದು. ಅದರಲ್ಲೂ 1900ರಿಂದ ಹೆಚ್ಚುಕಮ್ಮಿ 2000 ಇಸವಿಯ ವರೆಗಿನ ಅವಧಿಯಲ್ಲಿ ಕನ್ನಡ ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಿಮರ್ಶೆ ಪ್ರಕಾರಗಳಲ್ಲಿ ಅಚ್ಚರಿ ಹುಟ್ಟಿಸುವಷ್ಟು ಭಾಷಿಕ, ರಾಚನಿಕ ಹಾಗೂ ವೈಚಾರಿಕ ಅವಸ್ಥಾಂತರಗಳು ಸಾಧಿತವಾಗಿರುವುದನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಸಂಶೋಧನೆ, ಜಾನಪದ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಆತ್ಮಕಥೆ ಹಾಗೂ ಜೀವನ ಚರಿತ್ರೆ ಎಂಬ ಪ್ರಕಾರಗಳಲ್ಲಿ ಕೂಡ ಸಾಕಷ್ಟು ಕೆಲಸ ನಡೆದಿದೆ. ಇಂಥ ಉಲ್ಲೇಖನೀಯ ಸಾಧನೆಗಳನ್ನು ವ್ಯವಸ್ಥಿತ ಅಧ್ಯಯನಕ್ಕೊಳಪಡಿಸಿ ಸಮೀಕ್ಷಿಸುವ ಆಶಯದ ಪ್ರಬಂಧಗಳನ್ನು ಒಳಗೊಂಡ ಸಂಪುಟಗಳು ಇವು. 15 ವರ್ಷಗಳ ಹಿಂದೆ (2009) ಅಂಕೋಲೆಯ ಅಂಬಾರಕೊಡದ ಕವಿ ಹಾಗೂ ಸಂಘಟಕ ವಿಷ್ಣುನಾಯಕ ಅವರ ರಾಘವೇಂದ್ರ ಪ್ರಕಾಶನದ 25ನೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸಂಕಲ್ಪಿಸಿದಂತೆ ಅದೇ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದ 'ಶತಮಾನದ ಕನ್ನಡ ಸಾಹಿತ್ಯ ಸಂಪುಟ'ವನ್ನು ಇದೀಗ ಅಭಿನವ ಪ್ರಕಾಶನ ಪರಿಷ್ಕರಿಸಿ (ಇನ್ನಷ್ಟು ಸಮೀಕ್ಷಾ ಪ್ರಬಂಧಗಳನ್ನು ಸೇರಿಸಿ) ಎರಡು ಸಂಪುಟಗಳಲ್ಲಿ ಹೊರತಂದಿದೆ. ಕಾವ್ಯ, ನಾಟಕ, ಸಣ್ಣಕಥೆ, ಕಾದಂಬರಿ, ವಿಮರ್ಶೆ ಪ್ರಕಾರಗಳಲ್ಲಿ ಆಗಿರುವ ಕೃಷಿಯನ್ನು ತಲಾ 25 ವರ್ಷಗಳ ನಾಲ್ಕು ಹಂತಗಳಲ್ಲಿ ಕಾಣಿಸಿಕೊಡಲಾಗಿದ್ದರೆ, ಇನ್ನುಳಿದ ಪ್ರಕಾರಗಳಲ್ಲಿ ಆಗಿರುವ ಕೆಲಸವನ್ನು ಸಂಗ್ರಹರೂಪದಲ್ಲಿ ದಾಖಲಿಸಲಾಗಿದೆ. ಸಮೀಕ್ಷಾ ಕಾರ್ಯವೆಂಬುದೊಂದು ನಿರಂತರವಾಗಿ ನಡೆಯಬೇಕಾಗಿರುವ ಪ್ರಕ್ರಿಯೆ; ಎಲ್ಲ ಕ್ಷೇತ್ರಗಳಲ್ಲೂ ವಿಮರ್ಶೆಯನ್ನು ಸಹಿಸುವ, ಒಪ್ಪಿಗೆಯಾಗದಿರುವುದನ್ನು ಪ್ರಾಂಜಲವಾಗಿ ಚರ್ಚಿಸುವ ಎಚ್ಚರದ ಅಗತ್ಯವಿದೆ ಎಂದು ಸಂಪಾದಕರು ನಿವೇದಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಆಸಕ್ತ ಓದುಗ ವರ್ಗಕ್ಕೂ ವಿಶೇಷ ಮಾಹಿತಿ ಹಾಗೂ ಅಧ್ಯಯನ ಸಂಬಂಧಿ ಪ್ರೇರಣೆಗಳನ್ನು ಒದಗಿಸಬಲ್ಲ ಸಂಪುಟಗಳು ಇವು. ತುಷಾರ ಮಾಸ ಪತ್ರಿಕೆ ಜೂನ್ ನಲ್ಲಿ ಪ್ರಕಟವಾದ ವಿಮರ್ಶೆ

</abstract>
  <subject>
    <topic>Kannada Criticism</topic>
  </subject>
  <classification authority="ddc">K894.9 NAYS</classification>
  <relatedItem type="series">
    <titleInfo>
      <title/>
      <partNumber>Vol 2</partNumber>
    </titleInfo>
  </relatedItem>
  <recordInfo>
    <recordContentSource authority="marcorg"/>
    <recordCreationDate encoding="marc">260707</recordCreationDate>
    <recordChangeDate encoding="iso8601">20260707110442.0</recordChangeDate>
  </recordInfo>
</mods>
