K Chinnappa Gowda ಕೆ ಚಿನ್ನಪ್ಪ ಗೌಡ

Bhutharadhane: Mayada nade jogada nudi ಭೂತಾರಾಧನೆ : ಮಾಯದ ನಡೆ ಜೋಗದ ನುಡಿ - Karkala Creative Pustaka Mane 2025 - 484p. PB 25x17cm.

"ಭೂತಾರಾಧನೆ: ಜಾನಪದೀಯ ಅಧ್ಯಯನ" ಕೃತಿಯು ೧೯೯೦ರಲ್ಲಿ ಪ್ರಕಟವಾಗಿತ್ತು. ಈ ಕೃತಿಯ ವಿಸ್ತ್ರತ ಆವೃತ್ತಿ 'ಭೂತಾರಾಧನೆ : ಮಾಯದ ನಡೆ ಜೋಗದ ನುಡಿ" ಎಂಬ ಹೆಸರಿನಲ್ಲಿ ಇದೀಗ ಸಿದ್ಧವಾಗಿದೆ. ಭೂತಗಳು ಅಥವಾ ದೈವಗಳದ್ದು ಮಾಯದ ನಡೆ ಎಂಬುದು ತುಳುವರ ನಂಬಿಕೆ. ಭೂತಗಳು ಮಾಯ/ ಮಾಯಕ ಎಂಬ ಅಗೋಚರ ಜಗತ್ತಿನಲ್ಲಿ ವಾಸಿಸುತ್ತವೆ. ಸಾಮಾನ್ಯ ಮನುಷ್ಯರ ಕಣ್ಣಿಗೆ ಭೂತಗಳು ಕಾಣಿಸುವುದಿಲ್ಲ. ಕಾರಣಿಕಗಳ ಮೂಲಕ ಅವು ಅವುಗಳ ಅಸ್ತಿತ್ವವನ್ನು ತೋರಿಸುತ್ತವೆ. ನಿರ್ದಿಷ್ಟ ಕಾಲ, ಸ್ಥಳ ಮತ್ತು ಆವರಣವನ್ನು ನಿಗದಿಮಾಡಿ ವಿಶಿಷ್ಟ ಸಂದರ್ಭವನ್ನು ಕಲ್ಪಸಿದರೆ ಭೂತಗಳು ವ್ಯಕ್ತಿ ಮಾಧ್ಯಮದ ಮೂಲಕ ಕಾಣಿಸಿಕೊಳ್ಳುತ್ತವೆ. ಈ ಸಂದರ್ಭವನ್ನು ಮಧ್ಯಂತರ ಜಗತ್ತು ಎಂದು ಕರೆಯಬಹುದು. ಮಾಯದಿಂದ ಬಂದು ಜೋಗದಲ್ಲಿ ಪ್ರಕಟವಾಗುವ ಈ ಚಲನೆಯನ್ನು ಮಾಯದ ನಡೆ ಎಂದು ಭಾವಿಸಬಹುದು. ನಡೆ ಎಂಬ ಪದಕ್ಕೆ ನಡಿಗೆ, ಹೆಜ್ಜೆ, ನಡವಳಿಕೆ, ಸ್ವಭಾವ, ಆಚಾರ, ವ್ಯವಹಾರ, ನಡೆದು ಬರುವ ದಾರಿ, ಗುಡಿಯ ಎದುರುಭಾಗದ ದಾರಿ, ಗುಡಿಯ ಎದುರು ಭೂತ ಸಂಚರಿಸಲು ಅನುಕೂಲ ಕಲ್ಪಿಸುವ ದಾರಿ, ದೈವಗಳಿಗೆ ಒಪ್ಪಿಸುವ ಜಾನುವಾರು, ಒರತೆ, ಪ್ರವಾಹ ಹೀಗೆ ಅನೇಕ ಅರ್ಥಗಳಿವೆ. ಭೂತಾರಾಧನೆಯ ಚಲನೆಯನ್ನು, ಗತಿ ಬದಲಾವಣೆಯನ್ನು ನಡೆ ಪದ ಮುಖ್ಯವಾಗಿ ಸೂಚಿಸುತ್ತದೆ. ಲೌಕಿಕ-ಅಲೌಕಿಕ, ಇಹ- ಪರ, ವಾಸ್ತವ-ಮಾಯ, ಜೋಗ-ಮಾಯಕ, ನೆಲ-ಬಾನು ಇವುಗಳ ನಡುವೆ ದಾರಿ ಮಾಡಿಕೊಂಡು ನಡೆದಾಡುವ ಭೂತಗಳ ಸಂಚಾರವನ್ನು ನಡೆ ಎಂಬ ಪದ ಸಮರ್ಥವಾಗಿ ತಿಳಿಸುತ್ತದೆ. ಮನುಷ್ಯರು ವಾಸಿಸುವ ವಾಸ್ತವ ಲೋಕ ಮತ್ತು ಭೂತಗಳು ಇರುವ ಅಗೋಚರ ಜಗತ್ತು ಈ ಎರಡರ ನಡುವೆ ಸಂಬಂಧವನ್ನು ಏರ್ಪಡಿಸುವ ಉದ್ದೇಶವನ್ನು ಭೂತಾರಾಧನೆ ಹೊಂದಿದೆ. ನುಡಿ ಪದಕ್ಕೆ ಮಾತು, ವಚನ, ಭಾಷೆ, ಮಾತಾಡು, ನುಡಿಯು, ದೈವಾವೇಶದ ನುಡಿಕಟ್ಟು, ಭವಿಷ್ಯವಾಣಿ ಮೊದಲಾದ ಅರ್ಥಗಳಿವೆ. ಭಾಷಿಕ ಅಭಿವ್ಯಕ್ತಿಗಳಾದ ಪಾಡ್ಡನ, ಸಂಧಿ, ಪಾರಿ, ಮದಿಪು, ನುಡಿಕಟ್ಟು ಇವುಗಳನ್ನು ನುಡಿ ಪದವು ಪ್ರಧಾನವಾಗಿ ಒಳಗೊಳ್ಳುತ್ತದೆ. ಭೂತಗಳ ಜನಪದೀಯ ಪರಿಕಲ್ಪನೆ ಮತ್ತು ಅವುಗಳ ಆರಾಧನೆ ಇದರ ಎರಡು ಪ್ರಮುಖ ಆಯಾಮಗಳನ್ನು ಮಾಯದ ನಡೆ ಮತ್ತು ಜೋಗದ ನುಡಿ ಎಂಬ ಹೆಸರು ಒಳಗೊಂಡಿದೆ. ಭೂತಗಳ ಪರಿಕಲ್ಪನೆ ಮತ್ತು ಆರಾಧನೆಯು ಒಳಗೊಳ್ಳುವ ಬಣ್ಣ ಕುಣಿತ ವೇಷಭೂಷಣ ಮಾತು ಅಭಿನಯ ಹೀಗೆ ಧಾರ್ಮಿಕ ರಂಗಭೂಮಿ ಒಳಗೊಳ್ಳುವ ವಿಷಯಗಳ ವಿವೇಚನೆಯೇ ಈ ಕೃತಿಯ ವಸ್ತು.

9788199514881


Folklore
ಕರಾವಳಿ ಕರ್ನಾಟಕದ ಭೂತಾರಾಧನೆ ಸಂಸ್ಕೃತಿ, ಅದರ ಜಾನಪದ ಅಂಶಗಳು, ನಂಬಿಕೆಗಳು ಮತ್ತು ಸಾಮಾಜಿಕ ಆಯಾಮಗಳ ಕುರಿತು

398.4K / CHIB