Yeradu neregala naduve : Mangaluru Ganesha beedi kathana : ಎರಡು ನೆರೆಗಳ ನಡುವೆ : ಮಂಗಳೂರು ಗಣೇಶ ಬೀಡಿ ಕಥನ
- Mysure Rama Bai Charitable Foundation 2025
- 104p. PB 24x18cm
ಹೌದು, ನದಿಯ ನೀರಿಗೂ ನೆನಪೆಂಬುದುಂಟು. ಪ್ರತೀ ಐವತ್ತು ವರ್ಷಕ್ಕೊಮ್ಮೆ ನೇತ್ರಾವತಿ ನದಿ ಉಕ್ಕಿ ಹರಿದು ಊರನ್ನು ಮುಳುಗಿಸುವುದುಂಟು. 1923ರ ನೆರೆ ಬಂಟ್ವಾಳದ ಜನರ ಜೀವನವನ್ನು ಬಹಳವೇ ಕಾಡಿತ್ತು. ಅದೆಷ್ಟೋ ಜನರ ಬದುಕು ಬೀದಿಪಾಲಾಗಿತ್ತು. ಹೀಗಿರುವಾಗ ಊರೊಳಗೆ ನುಗ್ಗಿದ ಕೆಸರಿನಲ್ಲೇ ಚಿಗುರೊಡೆದು 1974ರ ನೆರೆಯ ಸಂದರ್ಭ ಲಕ್ಷಾಂತರ ಜನರನ್ನು ಪೊರೆದ ಬೃಹತ್ ವೃಕ್ಷವಾಗಿ ಬೆಳೆದ ಮಂಗಳೂರು ಗಣೇಶ್ ಬೀಡಿಯ ಕಥನವಿದು. ಪ್ರಸ್ತುತ ಧೂಮಪಾನ ನಿಷೇಧದಂತಹ ಕಠಿಣ ಸವಾಲುಗಳನ್ನು ಸಂಸ್ಥೆ ಎದುರಿಸುತ್ತಿದ್ದರೂ ದಕ್ಷಿಣ ಭಾರತದ ಒಂದು ಶತಮಾನವನ್ನೇ ಆರ್ಥಿಕ ಸಶಕ್ತತೆಯತ್ತ ಎತ್ತಿದ ಕೀರ್ತಿ ಈ ಸಂಸ್ಥೆಯದು. ಎರಡು ನೆರೆಗಳ ನಡುವೆ ವರವಾಗಿ ಬೆಳೆದು ನಿಂತ ಮಂಗಳೂರು ಗಣೇಶ್ ಬೀಡಿಯ ಯಶೋಗಾಥೆಯಿದು.
Saga of Mangaluru Ganesh Beedi Works Kannada Miscellaneous