Kaadu hudugana Haadu Paadu: A collection of life experiences ಕಾಡು ಹುಡುಗನ ಹಾಡು ಪಾಡು: ಅನುಭವ ಕಥನ
- Bangalore Amulya Pustaka 2024
- 107 p. PB 21x14 cm.
'ಕಾಡು ಹುಡುಗನ ಹಾಡು ಪಾಡು' ಕತೆಗಾರ ಸ್ವಾಮಿ ಪೊನ್ನಾಚಿ ಅವರ ಅನುಭವ ಕಥನ. ಈ ಸಂಕಲನದ ಬರಹಗಳು ಸಣ್ಣಕತೆ, ಲಲಿತ ಪ್ರಬಂಧಗಳ ಸೃಜನಶೀಲತೆ, ಸ್ವಾರಸ್ಯ, ರಂಜಕತೆ, ಪತ್ರಿಕಾ ಬರಹಗಳ ಖಚಿತತೆ, ಸಂಕ್ಷಿಪ್ತತೆ, ಸಂಶೋಧಕನ ಅಧ್ಯಯನಶೀಲತೆ ಸಾಮಾಜಿಕ ಕಳಕಳಿ ಈ ಎಲ್ಲವನ್ನೂ ಒಳಗೊಂಡಿದೆ. ಇಲ್ಲಿಯ ಬರಹಗಳು ರಂಜನೀಯತೆಯ ಆಚೆಗೂ ತಮ್ಮ ಕೈ ಚಾಚುತ್ತವೆ. ಈ ಸಂಕಲನದ ಬಹುತೇಕ ಬರಹಗಳು ನಮ್ಮ ನಾಡಿನ ವಿಶಿಷ್ಟ ಕಾಲಘಟ್ಟದವು. ದಂತಚೋರ ನರಹಂತಕ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದ್ದು. ಆ ಬಗ್ಗೆ ವಿವರಗಳು ಪತ್ರಿಕೆಗಳ ಹಳೆ ಸಂಚಿಕೆಗಳಲ್ಲಿ, ಪೊಲೀಸ್ ದಾಖಲೆಗಳಲ್ಲಿ ಸಿಕ್ಕಾವು. ಆದರೆ ಸ್ವಾಮಿ ಪೊನ್ನಾಚಿಯವರ ಬರಹಗಳಲ್ಲಿ ಈ ಪ್ರಕರಣಗಳ ಮತ್ತೊಂದು ಮಾನವೀಯ ಮುಖ ಬಿಚ್ಚಿಡುತ್ತಾರೆ. ಈ ಸಂಕಲನದಲ್ಲಿ ಹುತಾತ್ಮರಾದ ಶಕೀಲ್ ಅಹಮದ್ ಅವರ ಬಗ್ಗೆ ಬರಹ ಇದೆ. ಶಕೀಲ್ ಅಹಮದ್ ಅವರ ಕೆಲಸ ಸಾಧನೆ ತ್ಯಾಗ ಎಲ್ಲ ದಾಖಲೆಗಳಲ್ಲಿ ಸಿಕ್ಕೀತು. ಆದರೆ, ಸ್ವಾಮಿ ಪೊನ್ನಾಚಿ ಶಕೀಲ್ ಅಹಮದ್ ಅವರ ವ್ಯಕ್ತಿಚಿತ್ರ ಬಿಡಿಸಿರುವ ಪರಿಯೇ ಬೇರೆ. ಒಬ್ಬ ಕತೆಗಾರ ಮಾತ್ರ ಹೀಗೆ ಬಿಡಿಸಬಲ್ಲ. ಆದರೆ ವಾಚಾಮಗೋಚರ ಹೊಗಳದ ಅಥವಾ ಅನಗತ್ಯ ತೆಗಳದ, ಕಣ್ಣೀರು ಸುರಿಸದ ಸಂಯಮ ಇವರಿಗಿದೆ.