Kotekarina manthrika Siddamarda Baidya mattu tulunadina Billavara aradhanegalu ಕೋಟೆಕಾರಿನ ಮಾಂತ್ರಿಕ ಸಿದ್ಧಮರ್ದ ಬೈದ್ಯ ತುಳುನಾಡಿನ ಬಿಲ್ಲವರ ಆರಾಧನೆಗಳು
- Mangaluru Sai Sundari Seva Trust 2023
- 240 p. PB 21x14 cm.
18, 19ನೆಯ ಶತಮಾನದ ಕಾಲದಲ್ಲಿ ಬಿಲ್ಲವರು ಅಸ್ಪರ್ಶರಾಗಿದ್ದರು. ಅವರಿಗೆ ದೇವಾಲಯ ಪ್ರವೇಶವಿರಲಿಲ್ಲ ಎಂದು ನಾವು ಕೇಳಿದ್ದೇವೆ. ಮೇಲು ವರ್ಗದವರ ಶೋಷಣೆಯಿಂದ ಆ ಕಾಲದಲ್ಲಿ ಅದೆಷ್ಟೋ ಮಂದಿ ಬಿಲ್ಲವರು ಮತಾಂತರ ಹೊಂದಿದ್ದಾರೆ.
ಆದರೆ 450-500 ವರ್ಷಗಳ ಹಿಂದೆ ಕೋಟೆಕಾರು ಉಳ್ಳಾಲದಲ್ಲಿ ಸಿದ್ಧಮರ್ದ ಬೈದ್ಯರೆಂಬ ಬಿಲ್ಲವರೊಬ್ಬರು ಗಣಪತಿಯ ಶಿಲಾ ವಿಗ್ರಹವನ್ನು ವಿಧಿಪೂರ್ವಕ ಪ್ರತಿಷ್ಠಾಪಿಸಿ ಹಲವು ಸಮಯ ಪೂಜಾ ಕೈಂಕರ್ಯವನ್ನು ನಡೆಸಿದ್ದಾರೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ನಾಥಪಂಥದ ಕದ್ರಿ ಮಠದ ಅನುಯಾಯಿಗಳಾದ ಇವರು ನಾಥಪಂಥದ ಯೋಗಿಗಳಿಂದ ವೈದಿಕ ಹಾಗೂ ಮಾಂತ್ರಿಕ ವಿದ್ಯೆಯನ್ನು ಪಡೆದು ಹೆಸರಾಂತ ತಾಂತ್ರಿಕರೂ ಮಂತ್ರವಾದಿಗಳೂ ಆಗಿ ಅಪಾರ ಖ್ಯಾತಿ ಗಳಿಸಿದ್ದರು. ಇವರು ಎಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ವೈದ್ಯನಾಥ ದೈವದ ಪಾಡ್ಡನವೊಂದು ಇವರ ಹೆಸರಿನಿಂದಲೇ ಪ್ರಾರಂಭವಾಗಿ ಇವರ ವೈದಿಕ ಕ್ರಿಯೆಯನ್ನು ವರ್ಣಿಸಿ ತಾಂತ್ರಿಕ ಸಾಮರ್ಥಿಕೆಯನ್ನು ದೈವದ ಶಕ್ತಿಯೊಂದಿಗೆ ಸಮಾನವಾಗಿ ವೈಭವೀಕರಿಸುತ್ತದೆ.
9788194711889
Kotekar Siddhamardha Badhya and Worships of Billavas in Tulunadu