TY - BOOK AU - Narendra Rai Derla: AU - AU - DERLA (Narendra Rai): ದೇರ್ಲ (ನರೇಂದ್ರ ರೈ) TI - Adwitheeya: Sheena Shetty Krishna Mulya Sevakathana: ಅದ್ವಿತೀಯ: ಶೀನ ಶೆಟ್ಟಿ ಕೃಷ್ಣ ಮೂಲ್ಯ ಸೇವಾಕಥನ U1 - 361.3K 23 PY - 2022/// CY - Mangaluru PB - Akrati Ashaya Publications KW - Social Reformers: ಸಮಾಜ ಸುಧಾರಕರು KW - Soligaru: ಸೋಲಿಗರು KW - Ayush Grama: ಆಯುಷ್ ಗ್ರಾಮ KW - Sarvodaya: ಸರ್ವೋದಯ N2 - ಲೇಖಕ ನರೇಂದ್ರ ರೈ ದೇರ್ಲ ಅವರ ಕೃತಿ ಅದ್ವಿತೀಯ. ಕೃತಿಯಲ್ಲಿ ಜೆ.ಎನ್ ಜಯದೇವ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಸರ್ಕಾರಿ ವ್ಯವಸ್ಥೆಯನ್ನು ಟೀಕಿಸುವುದು, ಜಿಗುಪ್ಪೆಯಿಂದ ಬಯ್ಯುವುದು ಮಾತ್ರ ಪ್ರಚಲಿತವಿದ್ದ ನಮ್ಮ ಗುಂಪಿನಲ್ಲಿ ಸರ್ಕಾರದ ವ್ಯವಸ್ಥೆ-ಹಣ, ಸೌಲಭ್ಯ ಇರುವುದು ಜನರಿಗಾಗಿ, ಇವೆಲ್ಲವೂ ಜನರಿಗೆ ತಲುಪುವ ಹಾಗೆ ಕೆಲಸ ಮಾಡುವುದೇ ಸಮಾಜಕಾರ್ಯ, ಜನ ಎಚ್ಚೆತ್ತು ತಮ್ಮ ಹಕ್ಕನ್ನು ಅರಿತು ಜವಾಬ್ದಾರಿಯಿಂದ ವರ್ತಿಸಿದರೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಚೆನ್ನಾಗಿ ಜನರನ್ನು ತಲುಪುತ್ತವೆ. ಎಂಬ ಹೊಸ ಪ್ರತಿಪಾದನೆಯನ್ನು ಹಂತ ಹಂತವಾಗಿ ನಮಗೆ ಮನವರಿಕೆ ಮಾಡಿಕೊಟ್ಟವರು ಶೀನ ಶೆಟ್ಟಿ - ಕೃಷ್ಣ ಮೂಲ್ಯ ಅವರೊಡನೆ ಎರಡು ಮೂರು ದಶಕಗಳ ಒಡನಾಟ ನನಗಿದೆ. ಜನರ ಪರವಾಗಿ ಪರಕೀಯನೊಬ್ಬ ದನಿಯೆತ್ತಿ, ಅಧಿಕಾರಿಗಳನ್ನು ಹೆದರಿಸಿ ವೆದುಸಿ ನ್ಯಾಯ ಒದಗಿಸುವ ಬದಲಾಗಿ, ಜನರೇ ತಮ್ಮ ಸಮಸ್ಯೆಗಳನ್ನು ತಾವೇ ಮುಖಾಮುಖಿಯಾಗಿ ಎದುರಿಸಿ ಪರಿಹಾರ ಪಡೆಯುವುದು ಶೀನ ಶೆಟ್ಟಿ - ಕೃಷ್ಣ ಮೂಲ್ಯ ಅವರ ಸಮಾಜಸೇವೆಯ ತಾತ್ವಿಕ ನೆಲೆಗಟ್ಟು, ಹಲವು ಬಗೆಯ ಸೇವಾ ಕಾರ್ಯಗಳಲ್ಲಿ ತೊಡಗಿರುವ ಶ್ರೀ ತೇನ ಶೆಟ್ಟಿ ಮತ್ತು ಶ್ರೀ ಕೃಷ್ಣ ಮೂಲ್ಯ ಅವರು ಇಂದಿನ ಯುವಪೀಳಿಗೆಗೆ ಆದರ್ಶವಾಗಲಿ. ಈ ಕೃತಿಯ ಲೇಖಕರಾದ ಡಾ. ನರೇಂದ್ರ ರೈ ದೇರ್ಲ ಅವರು ಕೃಷಿ-ಪರಿಸರಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಬರೆದವರು. ಹಲವಾರು ಕೃತಿಗಳನ್ನು ನಡೆಸಿದವರು. ತೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ಸೇವಾಕಥನವನ್ನು ಈ ಕೃತಿಯಲ್ಲಿ ಓದುಗರ ಮನ ಮುಟ್ಟುವಂತೆ ಅನಾವರಣಗೊಳಿಸಿದ್ದಾರೆ ಎಂದಿದ್ದಾರೆ ER -