PRADIPA BHATTACHARYA ಪ್ರದೀಪ ಭಟ್ಟಾಚಾರ್ಯ

Pavitra panchakanyeyaru parama panchamithyegalu ಪವಿತ್ರ ಪಂಚಕನ್ಯೆಯರು- ಪರಮ ಪಂಚ ಮಿಥ್ಯೆಯರು - Udupi Rastrakavi Govinda Pai Samshodhana Kendra., 2007 - xx,86 PB

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ । ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||
ಪವಿತ್ರ ಪಂಚಕನ್ಯೆಯರು- ಪರಮ ಪಂಚ ಮಿಥ್ಯೆಯರು’ ಕೃತಿಯು ಮಹಾಬಲೇಶ್ವರ ರಾವ್ ಅವರ `ಅಹಲ್ಯಾ, ದ್ರೌಪದಿ, ತಾರಾ, ಕುಂತಿ (ಸೀತಾ), ಮಂಡೋದರಿ‘ ಇವರ ಬದುಕಿನ ಒಳವಿವರಗಳನ್ನು ಒಳಗೊಂಡಂತಹ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಹೆಣ್ಣುಗಳಲ್ಲಿ ಕೆಲವರು ಬಹು ಪತಿತ್ವವನ್ನು ಹೊಂದಿರುವಂಥರು. ಹಾಗಿದ್ದೂ ಅವರನ್ನು ಕನ್ಯೆಯರೆಂದು ಕರೆಯಲಾಯಿತು? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಅವರು ಬದುಕಿನಲ್ಲಿ ಅನುಭವಿಸಿದ ಏಳು ಬೀಳುಗಳನ್ನು ಈ ಪುಸ್ತಕ ತೆರೆದಿಡುತ್ತದೆ. `ಒಂದು ದೃಷ್ಟಿಯಿಂದ ಇವರು ಐವರೂ ಗಂಡಿನ ದಬ್ಬಾಳಿಕೆಗೆ ಒಳಗಾದವರು. ಆದರೂ ಬಾಳಿನ ಹೋರಾಟದಲ್ಲಿ ಸೋಲದೇ ಗೆದ್ದವರು‘ ಎಂದು ಮುನ್ನುಡಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯ ವಿವರಿಸುತ್ತಾರೆ.

81-86668-63-2


Kannada literature
Kannada Prose
Five holy virgins,five sacred myths

K894.4 PRAP