S P Balasubrahmanyam ಎಸ್.ಪಿ. ಬಾಲಸುಬ್ರಹ್ಮಣ್ಯಂ
- Bengaluru Rupa Prakashana 2021
- 304 PB
ಎಸ್.ಪಿ. ಬಾಲಸುಬ್ರಹ್ಮಣ್ಯಂ:ಬಾಲ್ಯದಿಂದ ಬಾಳಿದಷ್ಟು ದಿನಗಳು ಅಚ್ಚರಿಗಳು.ದೇಶ ಕಂಡ ಅದ್ವಿತೀಯ ಗಾಯಕರಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೂ ಒಬ್ಬರು. ಅವರ ಕುರಿತು ನಾಡಿನ ಅನೇಕ ಸಾಹಿತಿಗಳು, ಅವರ ಒಡನಾಡಿಗಳು ಬರೆದ ಲೇಖನಗಳ ಸಂಗ್ರಹವೇ ಈ ಕೃತಿ. ಸಂಗೀತ ದಿಗ್ಗಜ ಹಂಸಲೇಖ ಅವರು ಈ ಕೃತಿಗೆ ಕಾವ್ಯಾತ್ಮಕ ಮುನ್ನುಡಿ ಬರೆದಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು “ಬಣ್ಣನೆಗೆ ಎಟುಕದ, ಅಸಾಧಾರಣ ಮಾನವ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗಾಯಕ ಎಸ್ ಪಿ ಬಿ ಅವರ ಬಗೆಗೆ ಶ್ರದ್ಧೆ, ಭಕ್ತಿ, ಅಭಿಮಾನ, ಗೌರವಭಾವ,ಸಾಹಿತಿ, ಪ್ರಕಾಶಕ (ಕೃತಿಯ ಪ್ರಧಾನ ಸಂಪಾದಕರು) ಭದ್ರಾವತಿ ರಾಮಾಚಾರಿ ಅವರ ಈ ಬಗೆಯ ಸಾಹಿತ್ಯದ ಸಂಗೀತದ ಆರಾಧನೆಯ ದ್ಯೋತಕ ಈ ಮಹತ್ವದ ಕೃತಿ” ಎಂದು ಪ್ರಶಂಸಿಸಿದ್ದಾರೆ. ಈ ಕೃತಿಯ ಪ್ರಧಾನ ಸಂಪಾದಕರು-ಡಾ.ಭದ್ರಾವತಿ ರಾಮಾಚಾರಿ ಹಾಗೂ ಸಂಪಾದಕರು ತಾರಾನಾಥ್ ಭದ್ರಾವತಿ.