VIRESHA BADIGERA ವಿರೇಶ ಬಡಿಗೇರ

Kannada sahitya parampare mattu kambararu ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು - BengaLUru Ankita Pustaka 2012 - 111

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ ಅವರು ಚಂದ್ರಶೇಖರ ಕಂಬಾರ ಅವರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ ಕುರಿತು ಬರೆದಿದ್ದಾರೆ. ಕನ್ನಡ ವಿಮರ್ಶೆಯಲ್ಲಿ ಕಂಬಾರ ಬಗ್ಗೆ ಇದುವರೆಗೆ ಕಾವ್ಯ, ನಾಟಕ, ಕಾದಂಬರಿ ಬಗ್ಗೆ ಚರ್ಚೆಯಾದದ್ದೇ ಹೆಚ್ಚು. ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಮಣ್ಯ ಅವರು ಮುನ್ನುಡಿಯಲ್ಲಿ ’ಬಡಿಗೇರರ ಈ ಕೃತಿ ಮೊದಲ ಬಾರಿಗೆ ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ - ಈ ವಲಯಗಳನ್ನು ಒಳಗೊಂಡು ರೂಪಿತವಾಗಿದೆ. ಹೀಗಾಗಿ ಬಡಿಗೇರರ ಈ ಅಧ್ಯಯನ ಕಂಬಾರರ ಸಾಹಿತ್ಯ ಕೃಷಿಯ ಸಮಗ್ರ ಅಧ್ಯಯನದ ವ್ಯಾಪ್ತಿ ಪಡೆದು ಕೊಂಡಿದೆ. ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತು ಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ’ ಎಂದು ವಿವರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ ಅವರು ಚಂದ್ರಶೇಖರ ಕಂಬಾರ ಅವರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ ಕುರಿತು ಬರೆದಿದ್ದಾರೆ. ಕನ್ನಡ ವಿಮರ್ಶೆಯಲ್ಲಿ ಕಂಬಾರ ಬಗ್ಗೆ ಇದುವರೆಗೆ ಕಾವ್ಯ, ನಾಟಕ, ಕಾದಂಬರಿ ಬಗ್ಗೆ ಚರ್ಚೆಯಾದದ್ದೇ ಹೆಚ್ಚು. ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಮಣ್ಯ ಅವರು ಮುನ್ನುಡಿಯಲ್ಲಿ ’ಬಡಿಗೇರರ ಈ ಕೃತಿ ಮೊದಲ ಬಾರಿಗೆ ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ - ಈ ವಲಯಗಳನ್ನು ಒಳಗೊಂಡು ರೂಪಿತವಾಗಿದೆ. ಹೀಗಾಗಿ ಬಡಿಗೇರರ ಈ ಅಧ್ಯಯನ ಕಂಬಾರರ ಸಾಹಿತ್ಯ ಕೃಷಿಯ ಸಮಗ್ರ ಅಧ್ಯಯನದ ವ್ಯಾಪ್ತಿ ಪಡೆದು ಕೊಂಡಿದೆ. ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತು ಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ’ ಎಂದು ವಿವರಿಸಿದ್ದಾರೆ.


ಕಂಬಾರರ ಸಮಗ್ರ ಅಧ್ಯಯನ

K894.9 VIRK