ಬೇಂದ್ರೆ ಅನುಭಾವಿ ಕವಿ. ಅನುಭಾವ ಬೇಂದ್ರೆ ಕಾವ್ಯದ ವಿಶೇಷತೆಗಳಲ್ಲಿ ಒಂದು. ಹಿರಿಯ ವಿಮರ್ಶಕಿ ವಿಜಯಾ ದಬ್ಬೆ ಅವರು ಬೇಂದ್ರೆ ಕಾವ್ಯದಲ್ಲಿನ ಅನುಭಾವದ ಗುಣವನ್ನು ವಿಶ್ಲೇಷಿಸಿದ್ದಾರೆ. ಕ್ರೈಸ್ತ್ ಕಾಲೇಜಿನ ಕನ್ನಡ ಸಂಘವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧವಿದು. ಮೊದಲಿಗೆ ಕನ್ನಡ ಸಂಘದಿಂದ ಪ್ರಕಟವಾಗಿತ್ತು. ನಂತರ ಚಿ.ಶ್ರೀನಿವಾಸರಾಜು ಅವರು ಸಂಪಾದಿಸಿದ ಪುಸ್ತಕದಲ್ಲಿಯೂ ಸೇರ್ಪಡೆಯಾಗಿತ್ತು. ಅಭಿನವದಿಂದ ಮರುಮುದ್ರಣವಾಗಿದೆ. ಈ ಕೃತಿಯು ವಿಜಯಾ ದಬ್ಬೆ ಅವರ ಸಮಗ್ರ ಕೃತಿಗಳ ಸರಣಿಯಲ್ಲಿಯೂ ಸೇರಿದೆ.