ಲೇಖಕ ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಪರಿಸರಕ್ಕೆ ಸಂಬಂಧಪಟ್ಟ ಕೃತಿ ʻಮಂಗನ ಬೇಟೆʼ- ಮಲೆನಾಡ ಪರಿಸರ ಕಥನʼ. ಪುಸ್ತಕದಲ್ಲಿ ಪರಿಸರದ ಅನೇಕ ಜೀವ ವೈವಿಧ್ಯಗಳ ಬಗ್ಗೆ ವಿವರಗಳಿವೆ. 'ಮಂಗನ ಬ್ಯಾಟೆʼ ಅನ್ನುವುದು ಇಲ್ಲಿ ಬರುವ ಒಂದು ಕಥೆಯ ಶೀರ್ಷಿಕೆಯಾಗಿದೆ. ಸಿದ್ಧ ಎನ್ನುವ ವ್ಯಕ್ತಿ ಇಡೀ ಪುಸ್ತಕದ ಕೇಂದ್ರ ಪಾತ್ರವಾಗಿದೆ. ಪ್ರಕೃತಿಯೊಂದಿಗೆ ಬೆರೆದು ಮೀನು- ಏಡಿ ಹಿಡಿಯುತ್ತಾ, ಜೇನು ಕೀಳುತ್ತಾ ಅನೇಕ ಬಗೆಯ ಔಷಧಿಯುಕ್ತ ಬಳ್ಳಿಗಳು ಬೇರುಗಳನ್ನು ಕಾಡು ಪದಾರ್ಥಗಳನ್ನು ಸಂಗ್ರಹಿಸುವ ಈತನ ಕತೆ ಹೇಳುತ್ತಾ ಕಥೆ ಬೇರೆ ಮಜಲಿಗೆ ಸಾಗುತ್ತದೆ. ಹೀಗೆ ಮಲೆನಾಡ ಕುರಿತಾದ ವಿಷಯಗಳು, ಅಮೂಲವ್ಯವಾದ ವಿವರಗಳೂ, ಉಪಕತೆಗಳೂ, ಹಾಸ್ಯಪ್ರಸಂಗಗಳೂ, ಈ ಕಥನದಲ್ಲಿವೆ.