Benda kalu on Tost ಬೆಂದ ಕಾಳು ಆನ್ ಟೋಸ್ಟ್
- Dharavada Manohara Grantha Mala 2012
- xi,88
ಗಿರೀಶ ಕಾರ್ನಾಡ ಅವರ ಸಮಕಾಲೀನ ಬೆಂಗಳೂರು ಬದುಕನ್ನು ಆಧರಿಸಿ ರಚಿಸಿದ ನಾಟಕ. ಈ ನಾಟಕದ ಬಗ್ಗೆ ಹಿರಿಯ ರಂಗತಜ್ಞ ಕೆ. ಮರುಳಸಿದ್ದಪ್ಪ ಅವರು ’ಬೆಂಗಳೂರು ಮಹಾನಗರದ ಒಡಲಿನಲ್ಲಿ ಹುದುಗಿರುವ ಉದ್ವಿಗ್ನತೆ, ನೋವು-ನಲಿವನ್ನು ಮರೆ-ಮೋಸವನ್ನು, ತಲಸ್ಪರ್ಶಿಯಾಗಿ ಚಿತ್ರಿಸುತ್ತಿರುವ ಈ ನಾಟಕದ ಸಾಮಾಜಿಕ ವ್ಯಾಪ್ತಿ, ವಿಸ್ತಾರ, ಬೆರಗು ಹುಟ್ಟಿಸುವಂತಿದೆ. ನಿರ್ದಿಷ್ಟವಾಗಿ ಬೆಂಗಳೂರಿನ ಬದುಕಿಗೆ ಸಂಬಂಧಿಸಿರುವಂತಿದ್ದರೂ, ಈ ನಾಟಕದ ಕನ್ನಡಿಯಲ್ಲಿ ಭಾರತದ ಯಾವುದೇ ಮಹಾನಗರ ಕಾಣಿಸುವಂತಿದೆ. ದಿಗ್ಭ್ರಮೆ ಕವಿಸುವಂತೆ ಬೆಳೆಯುತ್ತಿರುವ ಮಹಾನಗರಗಳು ಬಿತ್ತುತ್ತಿರುವ ಕನಸು, ನಿರಾಸೆ, ಕಂಬನಿ, ಹಾಸ್ಯ ಸಂಭ್ರಮಗಳೆಲ್ಲ ಇಲ್ಲಿವೆ.
'ಬೆಂದ ಕಾಳು ಆನ್ ಟೋಸ್ಟ್', ಸಂಪೂರ್ಣವಾಗಿ ಇಪ್ಪತ್ತೊಂದನೆಯ ಶತಮಾನಕ್ಕೆ ಸೇರಿದ ನಾಟಕ.. ಗಟ್ಟಿಮುಟ್ಟಾದ ವಸ್ತು ರಚನೆ, ಸಾಹಿತ್ತಯ ರಚನೆಯ ಮೂಲಕವೇ ಅತ್ಯಂತ ಸಂಕೀರ್ಣವಾದ ಇಂದಿನ ಬದುಕನ್ನು ಕಟ್ಟಿ ಕೊಡಲಾಗಿದೆ ಎಂಬುದೇ ಇಲ್ಲಿ ಮಹತ್ವದ ವಿಚಾರವಾಗುತ್ತದೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.