ಗುಲ್ವಾಡಿ ವೆಂಕಟರಾವ್ (Gulvadi Venkata Rao) ಅವರು ರಚಿಸಿದ 'ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು' (1899) ಕನ್ನಡ ಸಾಹಿತ್ಯದ ಮೊತ್ತಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಎಂದು ಪರಿಗಣಿಸಲ್ಪಟ್ಟಿದೆ. ''ಇಂದಿರಾಬಾಯಿ'ಯಲ್ಲಿ ಶ್ರೀ ವೆಂಕಟರಾಯರು ಚಿತ್ರಿಸಿದ ಸಮಾಜ ಅವರದೇ ಆದ ಸಾರಸ್ವತ ಬ್ರಾಹಣ ಸಮಾಜ, ಅವರು ಪೋಲಿಸ್ ನೌಕರಿ ಯಲ್ಲಿದ್ದವರು ; ಆ ಕಾಲದಲ್ಲಿ ನಡೆದ ಘಟನೆಗಳನ್ನು ವಸ್ತುವಾಗಿಟ್ಟುಕೊಂಡು ಆಧುನಿಕ ಸಮಾಜಕ್ರಾಂತಿಗೆ ಗುರಿಯಾದ ಸಾರಸ್ವತ ಸಮಾಜದ ತಳಮಳವನ್ನು ಈ ಬರಹದಲ್ಲಿ ತೋರಿಸಿದ್ದಾರೆ. ಕಳೆದ ಶತಮಾನದಲ್ಲಿ, ಸಾಗರವನ್ನು ದಾಟಿ ವಿದೇಶಕ್ಕೆ ಹೋದವರನ್ನು ಜಾತಿಯಿಂದ ಹೊರಕ್ಕಿಡುತ್ತಿದ್ದರು. ಅಂತಹ ಒಂದು ವಾಸ್ತವಿಕ ಘಟನೆಯೂ ಈ ಕಾದಂಬರಿಯ ವಸ್ತುವಿನಲ್ಲಿ ಸೇರಿ ಕೊಂಡಿದೆ. ಇಂದಿನ ಸಮಾಜ, ಅಂತಹ ಸ್ಥಿತಿಯನ್ನು ದಾಟಿಬಂದಿದೆಯಾ ದರೂ, ತತ್ಸಮಾನ ಪ್ರಸಂಗಗಳನ್ನು ಸದಾ ಇದಿರಿಸುತ್ತಲೇ ಇರಬೇಕಾಗುತ್ತದೆ. (17-11-1961 ಪುತ್ತೂರು ಶಿವರಾಮ ಕಾರಂತ)