BASAVARAJA KATTIMANI ಬಸವರಾಜ ಕಟ್ಟೀಮನಿ.

August ombattu mattu itara kategalu: ಆಗಸ್ಟ್ ಒಂಬತ್ತು ಮತ್ತು ಇತರ ಕಥೆಗಳು - Bengaluru Prabhat Prakashan 1947

ದೇಶದ ಸ್ವಾತಂತ್ಯ್ರಕ್ಕಾಗಿ ನಡೆದ ಆಗಸ್ಟ್ ಕ್ರಾಂತಿಯ ಹಿನ್ನೆಲೆಯಲ್ಲಿ ರಚನೆಯಾದ ಕಾದಂಬರಿ -’ಆಗಸ್ಟ್ ಒಂಬತ್ತು. ಬಸವರಾಜ ಕಟ್ಟೀಮನಿ ರಚಿಸಿದ್ದು, ಅವರೇ ಹೇಳಿದಂತೆ ಮಾಡಿ ಮಡಿದವರ ಹುತಾತ್ಮ ಕಥೆ ಇದು. ಗಾಂಧೀಜಿ ಅವರು ‘ಮಾಡು ಇಲ್ಲವೇ ಮಡಿ ’ ಎಂದು ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಬಸವರಾಜ ಕಟ್ಟೀಮನಿ ಅವರು ಬರೆದ ರಕ್ತಧ್ವಜ, ಹುತಾತ್ಮ ಇತರೆ ಕಾದಂಬರಿಗಳಂತೆ ಆಗಸ್ಟ್ ಒಂಬತ್ತು ಕಾದಂಬರಿಯೂ ಅದೇ ಜಾಡಿನಲ್ಲಿ ಸಾಗುತ್ತದೆ. ಆದರೆ, ದೇಶದ ವಿವಿಧೆಡೆ ನಡೆದ ಘಟನೆಗಳು ತಮ್ಮ ಸ್ವರೂಪದಲ್ಲಿ ಬೇರೆ ಬೇರೆಯಾಗಿದ್ದರಿಂದ ಕಥೆಯೂ ನವೀನತೆ ಪಡೆದುಕೊಳ್ಳುವುದು ಇವರ ಕಾದಂಬರಿ ವೈಶಿಷ್ಟ್ಯ. ‘ನಮ್ಮ ವೀರ ಜನರು ನಿಜಕ್ಕೂ ಮಾಡಿದರು ಮತ್ತು ಮಡಿದರು’ ಎಂಬ ಸಂದೇಶವು ಈ ಕಾದಂಬರಿಯ ವಿಶೇಷತೆಯಾಗಿದೆ.

859/1136