VISHVESHVARA BHAT ವಿಶ್ವೇಶ್ವರ್ ಭಟ್ tr

Captian Gopinath avara banayana: apratima kannadiganobbana rochaka jivanagathe ಕ್ಯಾಪ್ಟನ್ ಗೋಪಿನಾಥ್ ಅವರ ಬಾನಯಾನ: ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ - BengaLuru Ankita Pustaka 2010 - 567

ಬಾನಯಾನ – ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾನುಭವದ ಸಾಹಸಗಾಥೆಯ ಕನ್ನಡಾನುವಾದ. ಇದನ್ನು ಕನ್ನಡಕ್ಕೆ ತಂದವರು ಈಗಿನ ಕನ್ನಡಪ್ರಭ ದಿನಪತ್ರಿಕೆಯ ಮತ್ತು ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರು.

ಕ್ಯಾಪ್ಟನ್ ಗೋಪಿನಾಥ್-ರವರು ಅಪ್ರತಿಮ ಕನ್ನಡಿಗರಲ್ಲೊಬ್ಬರು, ಪ್ರತಿಯೊಬ್ಬ ಯುವಕನಿಗೆ ಆದರ್ಶಪ್ರಾಯರು. ನಾವೆಲ್ಲರೂ ನಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ – ನಾನು ಒಬ್ಬ ಯೋಧನಾಗಬೇಕು ಎಂದೋ, ಒಬ್ಬ ಕೃಷಿಕನಾಗಬೇಕು ಎಂದೋ, ಒಬ್ಬ ಉದ್ಯಮಪತಿಯಾಗಬೇಕು ಎಂದೋ, ಒಬ್ಬ ರಾಜಕಾರಣಿಯಾಗಬೇಕು ಎಂದೋ ಕನಸು ಕಂಡಿರುತ್ತೇವೆ. ಆ ಕನಸುಗಳೆಲ್ಲವನ್ನು ಒಂದೇ ಜನ್ಮದಲ್ಲಿ ಸಾಧಿಸಿ ತೋರಿಸಿದರಲ್ಲದೇ, ಅದೆಲ್ಲದರಲ್ಲೂ ಯಶಸ್ವಿಯಾಗಿದ್ದು ಗೋಪಿನಾಥರ ಹಿರಿಮೆ. ಈ ಪುಸ್ತಕದಲ್ಲಿ ಅವರು ತಾವು ಈ ಕನಸಗಳನ್ನು ಕಂಡದ್ದರ ಬಗ್ಗೆ, ಆ ಸವಾಲುಗಳಿಗೆ ಎದೆಯೊಡ್ಡಿದ್ದರ ಬಗ್ಗೆ, ಛಲ-ಹಟಗಳಿಂದ ಕಷ್ಟಗಳನ್ನು ಎದುರಿಸಿದ್ದರ ಕುರಿತು ಸೊಗಸಾಗಿ ವಿವರಿಸಿದ್ದಾರೆ. ಇದು ಕೇವಲ ಅವರ ವೈಯಕ್ತಿಕ ಬದುಕಿನ ಕಥನವಲ್ಲ ಅಥವಾ ಆತ್ಮರತಿಯ ಅನಾವರಣವೂ ಅಲ್ಲ. ಈ ಪುಸ್ತಕ ಅವರ ಸಾಧನೆಯ ದಾಖಲೆ ಎಂಬುದು ನಿಜವಾದರೂ, ಅದು ಕೇವಲ ನೆಪ ಮಾತ್ರ. ಪುಸ್ತಕ ಓದುತ್ತಾ – ಸಾಧಕ ನಿಮಿತ್ತ ಮಾತ್ರ, ಸಾಧನೆಯೇ ಮುಖ್ಯ ಎಂಬ ಅಂಶ ನಮಗೆ ತಿಳಿಯುತ್ತದೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಬಯಸುವವರಿಗೆ ಈ ಪುಸ್ತಕ ಪ್ರೇರಣೆಯ ಗಣಿ; ಬಾಳಿನಲ್ಲಿ ಜಿಗುಪ್ಸೆಗೊಂಡು ನಿರಾಸೆಗೊಂಡವರಿಗೆ ರಾಮಬಾಣ. ಇನ್ಫೋಸಿಸ್-ನ ನಾರಾಯಣಮೂರ್ತಿಯವರು ಹೇಳುವ ಹಾಗೆ – “ಸಾಹಸ ಹಾಗೂ ಉದ್ಯಮಶೀಲತೆಯನ್ನು ಪರಿಣಾಮಕಾರಿಯಾಗಿ ಹೇಳುವ ಈ ಕೃತಿಯನ್ನು ಪ್ರತಿಯೊಬ್ಬ ಯುವಕ ಓದಲೇಬೇಕು”.

ಆರಂಭದಲ್ಲಿ ಗೊರೂರಿನಲ್ಲಿ ತಮ್ಮ ಬಾಲ್ಯದ ದಿನಗಳ ಕುರಿತು ತಿಳಿಸುತ್ತಾ “ಬೆಳೆಯುವ ಸಿರಿ ಮೊಳಕೆಯಲ್ಲೇ” ಎಂಬ ನಾಣ್ಣುಡಿಯ ಪ್ರಸ್ತುತಿಯ ಸಾಬೀತು ಮಾಡುತ್ತಾರೆ. ನಂತರ ಸೇನೆಗೆ ಸೇರಿ, “ಬಾಂಗ್ಲಾ ವಿಮೋಚನೆ” ಯುದ್ಧದ ಭಾಗವಾಗಿ ಸಮರಾಂಗಣದ ಅನುಭವಗಳನ್ನು ಓದುಗರ ಮುಂದೆ ತೆರೆದಿಡುತ್ತಾರೆ. ಇದಾದಮೇಲೆ ವಿಶ್ವವನ್ನು ಸುತ್ತಾಡಿದ ಚಿತ್ರಣವನ್ನು ಮೂಡಿಸಿ, ತಾವು ತಮ್ಮ ಹಳ್ಳಿಯ ಜಮೀನಿಗೆ ಹಿಂದಿರುಗಿ ಬಂದಿದ್ದನ್ನು ವಿವರಿಸುವಾಗ, ನಮಗೆ “ನಮ್ಮೂರೇ ನಮಗೆ ಮೇಲು” ಎಂದು ಹಿರಿಯರು ಯಾಕೆ ಹೇಳುತ್ತಿದ್ದರು ಎಂದು ಅರ್ಥವಾಗುತ್ತದೆ.

ನಂತರದ ಜೀವನದಲ್ಲಿ ಜಮೀನಿನಲ್ಲಿ ಕೃಷಿಕನಾಗಿದ್ದು, ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದು, ರೇಷ್ಮೆಕೃಷಿ – ಹೈನುಗಾರಿಕೆ ಮಾಡಿದ್ದು, ಏನ್ ಫೀಲ್ಡ್ ಮೋಟಾರ್ ಸೈಕಲ್ನ ಡೀಲರ್ ಶಿಪ್ ಪಡೆದದ್ದು ಮತ್ತು ಇನ್ನೂ ಹಲವಾರು ಸಾಹಸಗಳ ಬಗ್ಗೆ ವಿವರಗಳನ್ನು ಓದುವಾಗ ನಮಗೆ ರೋಮಾಂಚನವುಂಟಾಗದೇ ಇರದು. ಆದರೆ ಕಥೆ ಅಲ್ಲಿಗೇ ಮುಗಿಯುವುದಿಲ್ಲ, ಮತ್ತಷ್ಟು ರೋಚಕ ಹಂತ ತಲುಪುತ್ತದೆ. ಅದೇ ಭಾರತದ ಪ್ರಥಮ ಅಗ್ಗದ ವಿಮಾನಯಾನ ಸಂಸ್ಥೆ “ಏರ್ ಡೆಕ್ಕನ್” ಸ್ಥಾಪಿಸಿದ ಕುರಿತಾದ ಜ್ವಲಂತ ಕಥನ . ಯಾವುದೇ ಕುಂದುಕೊರತೆಗಳನ್ನು, ತಪ್ಪುಗಳನ್ನು ಮರೆಮಾಚದೆ ಇದನ್ನು ಚಿತ್ರಿಸಿದ್ದಾರೆ. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಹೆಣಗಾಡುತ್ತಿರುವ ಹಲವರಿಗೆ ಈ ಭಾಗ ನೀಡುವ ಹುಮಸ್ಸು ಅವರ್ಣನೀಯ.


rOchaka
KyApTan
kannaDiganobbana
jIvanagathe
GOpinAth
BAnayAna:
avara
apratima

926.5K VISK