ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರ ಆತ್ಮಕಥನವೇ ‘ಹಳ್ಳಿ ಹಕ್ಕಿಯ ಹಾಡು' ಎಂಬ ಕೃತಿ. ವಿಶ್ವನಾಥ್ ಇವರು ಈ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳಿಂದ ಹಿಡಿದು, ಕಲಿತ ಶಾಲೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಗೆ, ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ರೀತಿ ಇತ್ಯಾದಿಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಪ್ರಸಿದ್ಧರು ಆತ್ಮಕಥೆ ಬರೆದಾಗ ಅವರ ಜೀವನದ ವಿವಾದಿತ ಅಂಶಗಳ ರುಚಿಕರ ಮಾಹಿತಿಗಳಿಗೋಸ್ಕರ ನಾವು ಹುಡುಕುತ್ತೇವೆ. ಆದರೆ ಯಾವಾಗಲೂ ಅದು ಸಣ್ಣ ಪುಟ್ಟ ಸಾಲುಗಳಲ್ಲಿ ಮುಗಿದು ಇಡೀ ಪುಸ್ತಕ ತಮ್ಮ ಬಾಲ್ಯ, ತಂದೆ ತಾಯಿ ಇತ್ಯಾದಿ ಇತ್ಯಾದಿ ವಿಷಯಗಳಿಂದ ಇಡಿಕಿರಿದಿರುತ್ತದೆ.ವಿಶ್ವನಾಥ್ ಆತ್ಮಕಥೆ ಹಾಗಿಲ್ಲ.ವಿವಾದಿತ ಘಟನೆಗಳ ಹುತ್ತ ಅದು. ಡಿ.ಕೆ.ಶಿ ಜೊತೆಗಿನ ವಾಗ್ವಾದ, ಜೆ.ಎಚ್.ಪಟೇಲ್ ಜೊತೆಗಿನ ಒಡನಾಟ, ಅರಸು ಅವರ ಮೇಲಿನ ಗುರುಭಕ್ತಿ, ಗುಂಡೂರಾಯರ ಕುರಿತಾದ ಮಾತುಗಳು ಇವೆಲ್ಲ ಚೆನ್ನಾಗೇ ಇವೆ.