ಕವಿ, ಕತೆಗಾರ, ಪ್ರಬಂಧಕಾರ, ವಾಸ್ತುಶಿಲ್ಪಿ ನಾಗರಾಜ ವಸ್ತಾರೆ ಅವರ ಸಣ್ಣ ಕತೆಗಳ ಸಂಗ್ರಹ ಕೃತಿ ’ಹಾಕೂನ ಮಟಾಟ’.
ಕಳೆದುಕೊಂಡಿರುವ , ಕಳಚಿಕೊಂಡಿರುವ ಅದೆಷ್ಟೋ ಮಾನವ ಸಂಬಂಧಗಳ ಬಗ್ಗೆ ನಾಗರಾಜ ವಸ್ತಾರೆ ಅವರು ತಮ್ಮ ಕತೆಗಳಲ್ಲಿ ವಿಷಾದದಿಂದಲೇ ಚಿತ್ರಿಸುತ್ತಾ ಹೋಗುತ್ತಾರೆ. ಪಾತ್ರಗಳಿಗೆ ಸಂಬಂಧಿಸದ ಹೆಸರುಗಳನ್ನು ನೀಡುತ್ತಾರೆ. ಮನುಷ್ಯ ಸಂಬಂಧಗಳಲ್ಲೇ ಅಂತರ್ಗತವಾಗಿರುವ ದುರಂತವನ್ನು ಪ್ರಸ್ತಾಪಿಸುತ್ತಾ ಕತೆಗಳಲ್ಲಿನ ಪಾತ್ರವರ್ಗವನ್ನು ಸೃಷ್ಟಿಸಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಅಂತರ್ ಸಂಬಂಧಗಳು ಮತ್ತು ಅದರ ನೈತಿಕ ಸೂಕ್ಷ್ಮಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.