ತಮಸೋಮಾ ಜ್ಯೋತಿರ್ಗಮಯ ಆರತಿ ವೆಂಕಟೇಶ ಅವರ ಕಾದಂಬರಿಯಾಗಿದೆ. ಮಕ್ಕಳ ವ್ಯಕ್ತಿ ವಿಕಾಸಕ್ಕೆ ಹಿರಿಯರ ಮಾರ್ಗದರ್ಶನ ಬಹಳ ಮುಖ್ಯ. ಅವರಿಗೆ ಪ್ರೀತಿ, ಮಮತೆಯ ಸಿಂಚನ ಮಾಡದೆ ಅವರಲ್ಲಿ ದೊಡ್ಡಸ್ತಿಕೆ, ಡಂಭಾಚಾರವನ್ನು ಪ್ರೋತ್ಸಾಹಿಸಿ ಹಿರಿಯರಾಗಿ ತಾವೇ ಅಡ್ಡದಾರಿ ಗೆಳೆದರೆ ಅದರ ಪರಿಣಾಮವನ್ನು ತಾವೇ ಎದುರಿಸಬೇಕಾಗುತ್ತದೆ ಎಂಬ ಕಠೋರ ಸತ್ಯವನ್ನು ತಂದೆ ತಾಯಿ ಖಂಡಿತ ಮರೆಯಬಾರದು! ಬೆಳೆದು ನಿಂತ ಮರವನ್ನು ಬಾಗಿಸಲು ಪ್ರಯತ್ನಿಸಿದರೆ ಅದು ಮುರಿದು ನಮ್ಮ ಮೇಲೆ ಬೀಳುವುದು ಖಂಡಿತ! ಇಂಥ ಒಂದು ನಿದರ್ಶನವನ್ನು ನೈಜ ಘಟನೆಗಳೊಂದಿಗೆ ಹೆಣೆದು ಈ ಕಾದಂಬರಿಯಲ್ಲಿ ರೂಪಿಸಲಾಗಿದೆ.