ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ತಮ್ಮ ಸೃಜನಶೀಲ ಗದ್ಯ ಸಾಹಿತ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದಿರುವ ದೇಶದ ಏಕೈಕ ಸಾಹಿತಿ 'ಬೊಳುವಾರು ಮಹಮದ್ ಕುಂಞ'. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ತಂದಿತ್ತ ಮೊದಲಿಗರೂ ಇವರೇ. ಮಾತ್ರವಲ್ಲ, ಕನ್ನಡದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ 'ಮುಸ್ಲಿಮ್ ಬದುಕನ್ನು' ಪರಿಚಯಿಸಿದ ಮೊತ್ತಮೊದಲಿಗರೂ ಇವರೇ. ಇವರ ಮೊತ್ತಮೊದಲ ಕತೆಯಿಂದಲೂ ಬಲು ಹತ್ತಿರದಿಂದ ಗಮನಿಸುತ್ತಾ, ಬೆನ್ನುತಟ್ಟುತ್ತಾ ಬಂದಿರುವ ಟಿ. ಪಿ. ಅಶೋಕ ಅವರು, ಅಷ್ಟೇ ಆಸ್ತೆಯಿಂದ ಬೊಳುವಾರು ಅವರನ್ನು ಇಲ್ಲಿ ಪರಿಚಯಿಸಿದ್ದಾರೆ.