TY - BOOK AU - SUBHASH RAJAMANE TI - Nirdigantavagi eri: kannada kadambari vimarsheya vimarshe: ನಿರ್ದಿಗಂತವಾಗಿ ಏರಿ: ಕನ್ನಡ ಕಾದಂಬರಿ ವಿಮರ್ಶೆಯ ವಿಮರ್ಶೆ U1 - K894.309 SUBN PY - 2017/// CY - Bengaluru PB - - KW - vimarsheya KW - vimarshe KW - Nirdigantavagi KW - kannada KW - kadambari KW - eri N2 - ‘ನಿರ್ದಿಗಂತವಾಗಿ ಏರಿ’ ಲೇಖಕ ಸುಭಾಷ್ ರಾಜಮಾನೆ ಅವರ ವಿಮರ್ಶಾ ಲೇಖನಗಳ ಸಂಕಲನ. ಬೆಳಗಾವಿ ಸೀಮೆಯವರಾದ ರಾಜಮಾನೆ, ಗ್ರಾಮೀಣ ಪ್ರದೇಶದ ದಲಿತರು ಸಾಮಾನ್ಯವಾಗಿ ಅನುಭವಿಸುವ ಕಷ್ಟ ಅಪಮಾನ ಕಂಡವರು. ಅವರಂತೆ ಕಷ್ಟಪಟ್ಟು ಬೆಳೆದವರನ್ನು ನಾನು ಹೆಚ್ಚು ನೋಡಲಿಲ್ಲ. ಆದರೆ ರಾಜಮಾನೆಯವರಿಗೆ ಸಾಹಿತ್ಯದ ಓದು ಮತ್ತು ಬರೆಹಗಳು ಆತ್ಮವಿಶ್ವಾಸ ಮತ್ತು ಘನತೆಯ ಬದುಕನ್ನು ಕಟ್ಟಿಕೊಳ್ಳುವ ಹಾದಿಯಾಗಿ ಪರಿಣಮಿಸಿರುವುದು ಸ್ಪಷ್ಟವಾಗಿದೆ ಎನ್ನುತ್ತಾರೆ ಹಿರಿಯ ಲೇಖಕ ರಹಮತ್ ತರೀಕೆರೆ. ಕನ್ನಡದ ಕತೆ ಕಾವ್ಯ ಕಾದಂಬರಿಗಳನ್ನೇ ಓದುವವರು ಅಥವಾ ಅವನ್ನು ಆಕರವಾಗಿಸಿಕೊಂಡು ಸಂಶೋಧನೆ ಮಾಡುವವರು ಸಾಕಷ್ಟಿದ್ದಾರೆ. ಆದರೆ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಪ್ರೀತಿಯಿಂದ ಓದುವವರು ಅಥವಾ ಅವನ್ನಿಟ್ಟುಕೊಂಡು ಸಂಶೋಧನೆ ಮಾಡುವವರು ಕಡಿಮೆ. ರಾಜಮಾನೆ ಅವರಿಗೆ ಸಾಹಿತ್ಯ ವಿಮರ್ಶೆಯ ಜತೆ ಹಿಂದಿನಿಂದ ಒಡನಾಟ ಇದ್ದುದರಿಂದ ಅದನ್ನು ಅಧ್ಯಯನ ಮಾಡುವುದು ಸುಲಭವಾಯಿತು. ಈ ಪುಸ್ತಕ ಅವರ ಓದಿನ ಹರಹನ್ನೂ ವಿಶ್ಲೇಷಣ ಪ್ರತಿಭೆಯನ್ನೂ ಈ ಕೃತಿ ಒಳಗೊಂಡಿದೆ ER -