ಪ್ರೊ. ಎಂ. ಕೃಷ್ಣೇಗೌಡ ಅವರು ರಚಿಸಿದ ಕೃತಿ-ಜಲದ ಕಣ್ಣು, ಸಂಪುಟ-2. ಭೂಮಿಯೊಳಗೆ ನೀರು ಗುಪ್ತಗಾಮಿನಿಯಾಗಿ ಹರಿಯುತ್ತದೆ. ಅದರ ದಾರಿ ಯಾವುದು ಎಂಬುದನ್ನು ಕಂಡು ಹಿಡಿಯುವುದು ವೈಜ್ಞಾನಿಕ ಜಗತ್ತಿಗೆ ಒಂದು ಸವಾಲು. ಆದರೆ, ಅದನ್ನೇ ಸವಾಲು ಆಗಿ ಸ್ವೀಕರಿಸಿ, ಜಲದ ಮೂಲವನ್ನು ಪತ್ತೆ ಹಚ್ಚುವಲ್ಲಿ ಕೆಲವರು ತಮ್ಮದೇ ಆದ ವಿಧಾನಗಳಿಂದ ಯಶಸ್ವಿಯಾಗಿದ್ದು, ವಿಜ್ಞಾನಕ್ಕೆ ಸವಾಲಾಗೇ ಉಳಿದಿದೆ. ಇಂತಹ ವಿಸ್ಮಯಕಾರಿ ಸಂಗತಿಗಳಿಂದ ಕೂಡಿದ ಅಂಕಣ ಬರಹಗಳು ಈ ಕೃತಿಯಲ್ಲಿವೆ.