ಬದುಕಿನಲ್ಲಿ ನಮ್ಮ ಮೊದಲ ಆದ್ಯತೆ ಆರೋಗ್ಯ. ಉತ್ತಮ ಆರೋಗ್ಯಕ್ಕೆ ವೈಜ್ಞಾನಿಕವಾಗಿ ಮಾಹಿತಿ, ವೈಚಾರಿಕ ಮಾಹಿತಿಯ ಪುಸ್ತಕಗಳು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ 30 ಲೇಖನಗಳು ಈ ಕೃತಿಯಲ್ಲಿವೆ. ‘ಕಲಿಯುಗದ ಸಂಜೀವಿನಿ ಹೊಕ್ಕಳುಬಳ್ಳಿ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ವರ್ಷದ ಅತ್ಯತ್ತಮ ವಿಜ್ಞಾನ ಸಾಹಿತ್ಯ ಕೃತಿ ಎಂದು ಪರಿಗಣಿಸಿ ಬಹುಮಾನವಿತ್ತು ಗೌರವಿಸಿದೆ.