Ravindra kavya sanchaya ರವೀಂದ್ರ ಕಾವ್ಯ ಸಂಚಯ
- Maisuru Gita Buk Haus 2014
- 1147
ಗುರುದೇವ ರವೀಂದ್ರನಾಥ ಠಾಕೂರ ಅವರ ಕಾವ್ಯಗಳ ಕೃತಿ -ರವೀಂದ್ರ ಕಾವ್ಯ ಸಂಚಯ. ಈ ಎಲ್ಲ ಕಾವ್ಯಗಳನ್ನು ಅನುವಾದಿಸಿದವರು-ಜಿ. ರಾಮನಾಥ ಭಟ್. ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾವ್ಯ ಕೃತಿ- ಗೀತಾಂಜಲಿ ಸೇರಿದಂತೆ 16ನೇ ವಯಸ್ಸಿನಲ್ಲಿ ಭಾನುಶಿಂಘೋ (ಸೂರ್ಯಸಿಂಹ) ಗುಪ್ತ ಹೆಸರಿನಲ್ಲಿ ಪ್ರಕಟಿಸಿದ್ದ ಅವರ ಮೊದಲ ಕವನ... ಹೀಗೆ ಅವರ ಕವನಗಳ ಮೂಲ ಆಶಯಗಳನ್ನು, ಸಂದೇಶಗಳನ್ನು ಇಲ್ಲಿ ಓದುಗರಿಗೆ ನೀಡಿರುವ ಮಹತ್ವದ ಕೃತಿ. ರವೀಂದ್ರನಾಥ ಠಾಕೂರರು ಕಾವ್ಯ ವಲಯದಲ್ಲಿ ಸಂಚರಿಸಿ ಅನುಭವಿಸಿದ ಹಿತವನ್ನೇ ಈ ಕೃತಿಯ ಸಾಹಿತ್ಯದಲ್ಲಿ ಕಾಣಬಹುದು. ಈ ಪುಸ್ತಕ ಗುರುದೇವ ಅವರ ಕವನ ಸಂಕಲನಗಳನ್ನು, ಕಥನ ಕವನಗಳನ್ನು, ಗೀತ ನಾಟಕ, ಸಂಗೀತ ನಾಟಕ , ಪ್ರಬಂಧ, ಹಾಡುಗಳು, ಪ್ರವಾಸ, ಪ್ರಹಸನಗಳು, ಪಠ್ಯ ಪುಸ್ತಕ, ನೀಳ್ಗವಿತೆ, ದೇಶ ಭಕ್ತಿ ಗೀತೆ, ಜಾನಪದ ಸಾಹಿತ್ಯ, ಭಜನೆಗಳು, ಪ್ರವಚನಗಳು, ಸಣ್ಣ ಕತೆಗಳು, ಅನುವಾದಗಳು, ಆತ್ಮ ಕಥೆ, ಪತ್ರಗಳು ವ ಭಾಷಣಗಳ ಸಮಗ್ರ ಸಾಹಿತ್ಯದ ಸಂಗ್ರಹರೂಪ ಪರಿಚಯ ಮಾಡಿಕೊಡುತ್ತದೆ.
ಅಲ್ಲದೆ ಗುರುದೇವ ರವೀಂದ್ರನಾಥ ಅವರ ಮನೆತನ, ಬಾಲ್ಯ, ಶಿಕ್ಷಣ, ವೃತ್ತಿ ಪ್ರವೃತ್ತಿ, ಸಂಗೀತ, ಕಲೆ, ಚಿತ್ರಕಲೆ, ನಾಟಕ ನಿರ್ದೇಶನ, ಶಾಂತಿ ನಿಕೇತನ ಸ್ಥಾಪನೆ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಮಾಡಿದ ಕೊಡುಗೆಯನ್ನು ತೆರೆದಿಡುತ್ತದೆ.