Huyilagola Narayanarayaru: jivana sadhane ಹುಯಿಲಗೋಳ ನಾರಾಯಣರಾಯರು : ಜೀವನ ಸಾಧನೆ
- Bengaluru Kannada Pusthaka Pradhikara 2007
- xii,204
ಕನ್ನಡ ನಾಡಿನ ಏಕೀಕರಣದಲ್ಲಿ ಹಯಿಲಗೋಳ ನಾರಾಯಣರಾಯರ ಪಾತ್ರ ಬಹು ದೊಡ್ಡದು. ಶ್ರೀಮತಿ ರಾಧಾ ಕುಲಕರ್ಣಿಯವರು ಬರೆದಿರುವ ಹುಯಿಲಗೋಳ ನಾರಾಯಣರಾಯರ (ಜೀವನ ಸಾಧನೆ) ಪುಸ್ತಕ ಒಂದು ಉಪಯುಕ್ತ ಗ್ರಂಥ. ಕನ್ನಡ ನಾಡಿನ ಏಕೀಕರಣದ ಕಥನದಲ್ಲಿ ಹುಯಿಲಗೋಳರ ಹೆಸರು ಅಮೃತರೂಪಿಯಾದುದು. ಅವರು ರಚಿಸಿದ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ, ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಏಕತೆಯ ಮಂತ್ರ ಪಠಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವತ್ತಿಗೂ ಅದು ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ನಾರಾಯಣರಾಯದ ಕವಿತ್ವಕ್ಕೆ ಸಾಕ್ಷಿ. ಅವರ ಮೊಮ್ಮಗಳೂ ಆದ ಲೇಖಕಿ ರಾಧಾ ಕುಲಕರ್ಣಿಯವರು ನಾರಾಯಣರಾಯರನ್ನು ಹತ್ತಿರದಿಂದ ಕಂಡವರು. ಆ ಎಲ್ಲಾ ಅನುಭವಗಳನ್ನು, ಅವರ ವ್ಯಕ್ತಿತ್ವದ ಮಜಲುಗಳನ್ನು ಇಲ್ಲಿ ಓದುಗರ ಮುಂದಿಟ್ಟಿದ್ದಾರೆ.