ಕಬ್ಬಿಣ ಮತ್ತು ಇತರೆ ಲೋಹಗಳ ಮುಖ್ಯ ಕಸುಬನ್ನಾಗಿ ಘಿಸಾಡಿ ಸಮುದಾಯವು ಮಾಡಿಕೊಂಡಿದೆ. ಘಿಸಾಡಿ ಕಮ್ಮಾರರು, ಬೈಲು ಕಮ್ಮಾರರು, ರಜಪೂತ್ ಕಮ್ಮಾರ್, ಅಲೆಮಾರಿ ಕಮ್ಮಾರರು ಈ ಎಲ್ಲಾ ಹೆಸರುಗಳಿಂದದಲೂ ಕರೆಯಲ್ಪಡುತ್ತಾರೆ. ಈ ಸಮುದಾಯವು ಮೂಲ ರಾಜಸ್ಥಾನದ ಮೇವಾಡ ಪ್ರಾಂತ್ಯವಾಗಿದೆ. ಎತ್ತಿನ ಬಂಡಿ, ಕುದುರೆಯ ಟಾಂಗ, ಕತ್ತೆಗಳ ಮೇಲೆ ತಮ್ಮ ಸರಕುಗಳನ್ನು ಹೇರಿಕೊಂಡು ಕೆಲಸ ಹುಡುಕಿ ಒಂದು ಊರಿನಿಂದ ಇನ್ನೊಂದು ಊರಿಗೆ ತಿರುಗಾಡುವುದರಿಂದ ಈ ಸಮುದಾಯವು “ಗೌಡಾಲಿಯಾ ಲೋಹಾರ” ಎಂಬ ಹೆಸರಿನಿಂದಲೂ ಗುರುತಿಸಲ್ಪಡುತ್ತಾರೆ.