Black Friday: ಬ್ಲ್ಯಾಕ್ ಫ್ರೈಡೆ
- Bengaluru Bhavana Prakashana 2005
- xiv,236
ಭಾರತವೆಂಬ ಮಹಾದೈತ್ಯ, ಸಾತ್ವಿಕ ಶಕ್ತಿಯ ಕರಡಿಗೆ ಮೈಯೆಲ್ಲ ಗಾಯ, ಹಾಗೆ ಗಾಯ ಮಾಡಿಮಾಡಿ, ನೆತ್ತರು ಹರಿಸಿ ಹರಿಸಿಯೇ ಭಾರತವನ್ನು ನಿಶ್ಯಕ್ತಗೊಳಿಸುವುದು ಪಾಕಿಸ್ತಾನವೆಂಬ ಕ್ಷುದ್ರರಾಷ್ಟ್ರದ ಹುನ್ನಾರ, ಅಂಥದ್ದೊಂದು ಹುನ್ನಾರಕ್ಕೆ ಮುಂಬಯಿ ಎಂಬ ಮಹಾನಗರಿ ಬಲಿಯಾದದ್ದು 1993ರಲ್ಲಿ. ಆ ಸರಣಿ ಬಾಂಬ್ ಸ್ಫೋಟಗಳ ದುರಂತವನ್ನು ಈ ದೇಶ ಯಾವತ್ತಿಗೂ ಮರೆಯಲಾರದು.
ಪಾಕಿಸ್ತಾನದ ಈ ಹುನ್ನಾರಕ್ಕೆ ಜೊತೆಯಾದವರು ಮುಂಬಯಿಯ ಅಂಡರ್ವರ್ಲ್ಡ್ ಮಂದಿ. ಅವರು ಬಾಂಬೆಯನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಂಡೇ ಆ ಮಹಾನಗರಕ್ಕೆ ಪದೇಪದೆ ಚೂರಿ ಹಾಕಿದವರು. ಅವರೊಂದಿಗೆ ಕೈ ಮಿಲಾಯಿಸಿದವರು ನಮ್ಮ ಸಿನೆಮಾ ನಟರು!
ದಾವೂದ್ ಇಬ್ರಾಹಿಂನಿಂದ ಹಿಡಿದು ಟೈಗರ್ ಮೆಮನ್ ತನಕ, ಛೋಟಾ ಶಕೀಲ್ನಿಂದ ಹಿಡಿದು ಸಂಜಯ್ದತ್ ತನಕ ಎಲ್ಲರ ಸ್ಪಷ್ಟ ಚಿತ್ರಣಗಳೂ ಇಲ್ಲಿದೆ. ಓದಲು ಕುಳಿತಾಗ ಪತ್ತೇದಾರಿ ಕಾದಂಬರಿಯಂತೆ, ಓದಿ ಮುಗಿಸಿದಾಗ ಇತಿಹಾಸದ ಒಂದು painful ಅಧ್ಯಾಯದಂತೆ ಭಾಸವಾಗುವ ಈ ಪುಸ್ತಕ, ಈ ವರ್ಷದ ಆಗಸ್ಟ್ 15ರ ಕಾಣಿಕೆ ನಿಮಗೆ. -ರವಿ ಬೆಳಗೆರೆ