Bharatiya itihasa samaja mattu samskrati ಭಾರತೀಯ ಇತಿಹಾಸ ಸಮಾಜ ಮತ್ತು ಸಂಸ್ಕ್ರತಿ
- Bengaluru Karnataka Sahitya Akademi. 2004
- xxviii,373
ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಚಿಂತನೆಗಳು ಅನೇಕ ಮುಖವಾಗಿ ವಸಾಹತೋತ್ತರ ನಡೆದವು, ನಡೆಯುತ್ತಲೂ ಇವೆ. ಇಂಥ ಚಿಂತನೆಗಳು ಸಾಹಿತ್ಯಕ್ಕೆ ಸಾಮಗ್ರಿಯನ್ನು ಒದಗಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಉದಾ-ಲೋಹಿಯಾ ಚಿಂತನೆಗಳು, ಅಂಬೇಡ್ಕರ ಚಿಂತನೆಗಳು ಇತ್ಯಾದಿ.
ಹೊಸ ಮಾಹಿತಿ ಭಾರತ ಸ್ವಾತಂತ್ರ್ಯಾನಂತರ ದೇಶಕ್ಕೆ ಸ್ವರೂಪವನ್ನು ಕೊಡಲು ಪ್ರಯತ್ನಗಳು ನಡೆಯುತ್ತಲಿವೆ. ಸಮಾಜವಾದೀ ಸ್ವರೂಪದ ಸಮಾಜರಚನೆಯ ಮೇಲೆ ಒತ್ತು ಬಿದ್ದಿರುವುದನ್ನು ನಾವೆಲ್ಲ ಬಲ್ಲೆವು. ವರ್ಗ, ವರ್ಣ, ಲಿಂಗ-ಇವುಗಳಲ್ಲಿಯ ಅಸಮಾನತೆ ಹೋಗಲಾಡಿಸಲು ಯತ್ನಗಳು ನಡೆಯುತ್ತಲೇ ಇವೆ. ಔದ್ಯಮಿಕ ರಂಗದಲ್ಲಿ ತೀವ್ರತರದ ಬದಲಾವಣೆಗಳಾಗುತ್ತಿರುವಂತೆ, ತಂತ್ರಜ್ಞಾನ ಬಂದ ಮೇಲೆ ಆ ಬದಲಾವಣೆಗೆ ತೀವ್ರಗತಿ ಬ೦ದಿದೆ. ಜಾಗತೀಕರಣ, ಉದಾರೀಕರಣದಂಥ ಪ್ರಕ್ರಿಯೆಗಳಿಂದಲೂ ನಾವು ಹೊಸದನ್ನು ಕಾಣುತ್ತಿದ್ದೇವೆ. ಬದಲಾಗುತ್ತಿರುವ ಜೀವನಕ್ರಮ, ಬದಲಾಗುತ್ತಿರುವ ಸಮಾಜ ವ್ಯವಸ್ಥೆ ಹಾಗೂ ತಿದ್ದುಪಡಿಗೊಳ್ಳುತ್ತಿರುವ ಕಾನೂನುಗಳು ಅನೇಕ ವಿಚಾರವಾದಿಗಳನ್ನು ಕೆಣಕುತ್ತಲಿವೆ. ಐಜಾಜ್ ಅಹ್ಮದ್, ರೋಮಿಲಾ ಥಾಪರ್, ಮಧುಕೇಶ್ವರ, ఆకి ನಂದಿ ಮುಂತಾದವರ ಚಿಂತನೆಗಳು ನಿಟ್ಟಿನಲ್ಲಿ ಗಮನಾರ್ಹವಾಗಿವೆ. ಇವರೆಲ್ಲ ಬರೆದದ್ದು, ಬರೆಯುತ್ತಿರುವುದು ಇಂಗ್ಲಿಷಿನಲ್ಲಿಯೇ. ಅಲ್ಲೊಂದು ಇಲ್ಲೊಂದು ಲೇಖನ ಕನ್ನಡಕ್ಕೆ ಅನುವಾದವಾಗಿ ಬಂದಿರಬಹುದು. ಕೆಲವಾದರೂ ಪ್ರಮುಖ ಲೇಖನಗಳು ಕನ್ನಡಕ್ಕೆ ಬರುವುದು ಅಗತ್ಯವೆನಿಸಿದ್ದರಿಂದ ಇಲ್ಲಿ ಹನ್ನೆರಡು ಲೇಖನಗಳನ್ನು ಅನುವಾದಿಸಿ ಕೊಡಲಾಗಿದೆ.