VISHVESHVARA BHAT. ವಿಶ್ವೇಶ್ವರ ಭಟ್

Wonder YNK ವಂಡರ್ ವೈ ಎನ್ ಕೆ - Puttur. Karnataka Sangha., 1999 - 144

ನಾನು ಬರೆಯುವುದು ಸಹಜ ಉಲ್ಲಾಸಕ್ಕಾಗಿ. ಅದರಿಂದ ದೊರೆಯುವ ಸಂತೋಷಕ್ಕಾಗಿ. ನಾನು ನಡೆಯುವ ಹಾಗೆ, ನಗುವ ಹಾಗೆ, ಸಂಗೀತ ವನ್ನು, ಚಿತ್ರಕಲೆಯನ್ನು, ಕ್ರಿಕೆಟ್ಟನ್ನು, ಹಸಿರನ್ನು ಕಂಡು ಸಂತೋಷ ಪಡುವಂತೆ ಬರೆಯುವ ಮೂಲಕವೂ ಆನಂದವನ್ನು ಆಸ್ವಾದಿಸು ತಿದ್ದೇನೆ. ಅದಕ್ಕೆ ಅಂಥ ವಿಶೇಷ ಕಾರಣಗಳೇನೂ ಇರಬೇಕಾಗಿಲ್ಲ. ಅದು ಉಸಿರಾಟದ ಹಾಗೆ ಸಹಜ, ಅಷ್ಟೇ ಸರಾಗ.

ಷಹರ್‌ಜಾದೆಯ ಕತೆ ನಿಮಗೆಲ್ಲ ಗೊತ್ತು. ಆಕೆ ಕತೆ ಹೇಳುತ್ತಾ, ಹೇಳುತ್ತಾ ಸಾವನ್ನು ಗೆದ್ದಳು. ಕತೆ ಹೇಳುವುದನ್ನು ನಿಲ್ಲಿಸಿದ ಕ್ಷಣ ಅವಳಿಗೆ ಸಾವು ಕಾದಿತ್ತು. ಹಾಗೇ ನಾನು ಬರೆಯುವ ಮೂಲಕ ಕಾಲವನ್ನು ಮೀರುತ್ತೇನೆ ಅನ್ನಬಹುದೇನೋ. ದೇಹದಂತೆ ಮನಸ್ಸಿಗೂ ಮುಪ್ಪು ಅಡರುತ್ತದೆ. ಬರವಣಿಗೆ, ನಿಜವಾದ ಆನಂದ ನೀಡುವ ಬರವಣಿಗೆ ಈ ಮುಪ್ಪನ್ನು ದೂರವಿರಿಸುವ ಮದ್ದು.

ಇನ್ನೊಂದು ವಿಚಾರ ಕೇಳಿ. ಸಕ್ಕರೆಯಾಗಲೀ, ಉಪ್ಪಾಗಲೀ ತನ್ನಿಂದ ತಾನೇ ಅದಲ್ಲ. ಅದರ ರುಚಿ ನಾಲಗೆಯಲ್ಲಿ ಹುಟ್ಟುವಂಥದ್ದು. ಜೊಲ್ಲಿನ ಅಂಶ ಸೇರದ ಅದು ರುಚಿ ಬಿಟ್ಟುಕೊಡುವುದಿಲ್ಲ. ಸಾಹಿತ್ಯ ಕೃತಿಗಳೂ ಹಾಗೆಯೇ. ಮನುಷ್ಯನ ಸಂವೇದನೆಯ ಜತೆ ಬೆರೆಯದೇ ಇದ್ದರೆ ಅದು ಬರೀ ಅಕ್ಷರಮಾಲಿಕೆ ಅಷ್ಟೇ.

ನನ್ನ ಬರಹವೂ ಅಷ್ಟೇ, ಅನುಭವವನ್ನು ಹಂಚುವ, ರುಚಿಯಾಗಿಸುವ ವಿಧಾನ. ಅದು ವಿಧಾನ ಕೂಡ ಅಲ್ಲ, ಸಹಜ ಜೀವನ ಕ್ರಮ. ಅದಕ್ಕೆ ವಿವರಣೆ, ವಿಶ್ಲೇಷಣೆ ಬೇಡ.
- ವೈಎನ್‌ಕೆ

K894.9 VISV