Nadanadi. ನಾದ ನದಿ
- Bengaluru Ananya 2002
- 435 p. PB 21.5x14 cm.
'ಸುಚಿನಾಂ ಶ್ರೀಮತಾಂ ಗೆಹ ಯೋಗ ಭ್ರಷ್ಟು ಪ್ರಾಭಿಜಾಯತೆ'' ಭಗವದ್ಗೀತೆ
ಜ್ಞಾನಪ್ರಾಪ್ತಿಯ ಬಯಕೆ, ಶ್ರದ್ದೆ ಇದ್ದಾಗ್ಯೂ ಕೂಡ ಅತ್ಯಾವಶ್ಯಕವಾದ ಸಾಧನೆ ಸಾದ್ಯವಾಗದೆ ಇದ್ದುದಕ್ಕಾಗಿ ಯೋಗಸಿದ್ಧಿ ಅಥವಾ ಯಶಪ್ರಾಪ್ತಿಯಾಗದ ಪುಣ್ಯ ಆತ್ಮ ಸ್ವರ್ಗಲೋಕವನ್ನು ತಲುಪಿ ಮತ್ತೆ ತಿರುಗಿ ಭೂಲೋಕದಲ್ಲಿ ಶುಚಿರ್ಭೂತ ಶ್ರೀಮಂತೆ ಸಂಸ್ಕಾರಶೀಲ ಮನೆತನದಲ್ಲಿ ಜನ್ಮವೆತ್ತುತ್ತದೆ. ಯೋಗದಿಂದ ಭ್ರಷ್ಟವಾಗಿರುವ ಈ ಆತ್ಮಕ್ಕೆ ಪೂರ್ವಜನ್ಮದ ಸಂಸ್ಕಾರಗಳು ಪ್ರಾಪ್ತವಾಗಿದ್ದು, ಈ ಜನ್ಮದ ಸಾಧನೆಯಿಂದ ಬಯಸಿದ ಸಿದ್ದಿ ಯಶಸ್ಸು ದೊರಕುತ್ತದೆ. ಈ ಜನ್ಮದ ತಮ್ಮ ಪುಣ್ಯಕರ್ಮಗಳಿಂದ ಸಿದ್ದಿಯನ್ನು ಪಡೆದು ಆ ಯೋಗಭ್ರಷ್ಟ ಆತ್ಮ ಉತ್ತಮಗತಿಯನ್ನು ಪಡೆಯುತ್ತದೆ. ಪಂ. ಮಲ್ಲಿಕಾರ್ಜುನ ಮನೂರರೂ ಕೂಡ ಇಂತಹ ಒಂದು 'ಯೋಗಭ್ರಷ್ಟ' ಆತ್ಮರಾಗಿದ್ದು. ತಮ್ಮ ಸಾಧನೆ, ಭಕ್ತಿಯಿಂದ ಈ ಜನ್ಮವನ್ನು ಸಾರ್ಥಕ ಮಾಡಿಕೊಂಡರು ಎನ್ನುವುದೇ ಲೇಖಕಿಯ ಅಭಿಪ್ರಾಯ. ಮೊದಲೇ ಹೇಳಿದಂತೆ ಕೆಲ ಕಾಲ್ಪನಿಕ ಘಟನೆಗಳ ಹಾಗೂ ನಿಜ ಸಂಗತಿಗಳ ಆಧಾರದಿಂದ ಸಿದ್ಧವಾದ ಈ ಕಾದಂಬರಿ ಒಂದೇ ವರ್ಷದಲ್ಲಿ ಐದು ಬೇರೆ ಬೇರೆ ಪಾರಿತೋಷಕಗಳನ್ನು ಪಡೆದದು ಕಾದಂಬರಿಯ ಶ್ರೇಷ್ಠತೆಗೆ. ಪ್ರಾ. ವಿದ್ಯಾ ಸಪ್ರೆಯವರ ಸಾಹಿತ್ಯ ಪ್ರತಿಭೆಗೆ ಕನ್ನಡಿ ಹಿಡಿದಂತೆ. ಈ ಶ್ರೇಷ್ಠ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಲು ಅವಕಾಶ, ಅನುಮತಿ ಕೊಟ್ಟಿದ್ದಕ್ಕಾಗಿ ನಾನು ಶ್ರೀಮತಿ ವಿದ್ಯಾ ಸಪ್ಪೆಯವರಿಗೆ ಆಭಾರಿಯಾಗಿದ್ದೇನೆ.
ಕನ್ನಡದ ರಸಿಕರು ಈ ಪುಸ್ತಕವನ್ನು ಸ್ವಾಗತಿಸುತ್ತಾರೆಂದು ನಂಬಿದ್ದೇನೆ.