Buta: kategala sankalan. ಬೂತ: ಕಥೆಗಳ ಸಂಕಲನ
- Davanagere Antaranga Prakashana 2000
- x,130
'ಬೂತ' ಶ್ರೇಷ್ಠ ಕತೆಗಾರರಾದ ಕೃಷ್ಣಮಾಸಡಿಯವರ ಕೃತಿಯಾಗಿದೆ. ಈ ಕೃತಿಯು ನವ್ಯ ಚಳವಳಿಯ ಅಂತ್ಯದಲ್ಲಿ ಬರೆಯಲು ತೊಡಗಿದ ಅವರ ಕತೆಗಳು ಇಲ್ಲಿವೆ. ಯಾವ ಚಳವಳಿಗಳ ವ್ಯಾಮೋಹಕ್ಕೂ ಬೀಳದೆ ಸ್ವತಂತ್ರ ಛಾಪು ಉಳಿಸಿಕೊಂಡಿರುವುದು ಈ ಕತೆಗಳಲ್ಲಿ ಕಂಡು ಬರುತ್ತದೆ. ಸರಿಸುಮಾರು ಎರಡು ದಶಕಗಳಿಂದ ಬರೆದ ಕತೆಗಳು ಇಲ್ಲಿವೆ. ಹಾದರ, ಪ್ರೇಮ ದುರಂತಗಳು ಕತೆಗಳಲ್ಲಿ ಎದ್ದು ಕಂಡರೂ, ನಮ್ಮ ಸಮಾಜದ ಬದುಕು ಬದುಕಿನೊಳಗಿರುವ ವಿವಿಧ ಸೂಕ್ತಗಳನ್ನು ವ್ಯಂಗ್ಯ ಹೇಳಿಕೆಗಳಷ್ಟೇ ಸೀಮಿತಗೊಳಿಸದೆ, ಉತ್ಕಟವಾದ ಸರಳತೆಯಿಂದ ಇವುಗಳು ಸಾಗುವುದನ್ನು ಇಲ್ಲಿ ಕಾಣಬಹುದು. ಕೆಲವು ಕತೆಗಳು ತೆರೆದಿಡುವ ಲೋಕ ಕಥನ ಕಲೆಯಲ್ಲಿಯೇ ವಿಶಿಷ್ಟವಾಗಿ ಉಳಿದುಕೊಳ್ಳುವಂದವು, ವಿನೂತನ ಶೈಲಿಯಲ್ಲಿರುವ ಇವುಗಳು ಬೀಸುವ ಗಾಳಿ ತನ್ನದೇ ಹೊಚ್ಚ ಹೊಸತನದೊಂದಿಗೆ ಆವರಿಸಿಕೊಳ್ಳುತ್ತವೆ. ಎಂದು ಅಂತರಂಗ ಪ್ರಕಾಶನ ಪುಸ್ತಕದ ಬಗ್ಗೆ ತಿಳಿಸಿದೆ.