ಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಬೆಳಕಿನ ಹೊಸ ದಾರಿಗಾಗಿ ಹುಡುಕಾಟ ನಡೆಸುವ ಎರಡು ಸೆಲೆಯನ್ನು, ಮತಾಂಧತೆಯ ಕಿಚ್ಚಿನಲ್ಲಿ ಬತ್ತಿ ಹೋಗುತ್ತಿರುವ ಮಾನವತೆಯ ಜೀವಸೆಲೆಯನ್ನು ಹಿಡಿದಿಡಲು ಲೇಖಕ ರಂಜಾನ್ ದರ್ಗಾ ಅವರು ಈ ಕೃತಿಯಲ್ಲಿ ಯತ್ನಿಸಿದ್ದಾರೆ. ಬಸವಣ್ಣನಿಂದ ಅಂಬೇಡ್ಕರ್ ವರೆಗೆ, ಮಾರ್ಕ್ಸನಿಂದ ನೆರೂಡಾವರೆಗೆ ಜೀವ ಸಂಕುಲದ ಉನ್ನತಿಗಾಗಿ ಚಿಂತಿಸಿದ ಎಲ್ಲರನ್ನೂ ದರ್ಗಾ ಅವರು ತಮ್ಮ ಈ ಲೇಖನಗಳ ಮೂಲಕ ಪರಿಚಯಿಸಿದ್ದಾರೆ.